Advertisement

ಬೈಕಿಗೆ ಕಾರು ಡಿಕ್ಕಿ: ದಂಪತಿಗಳಿಗೆ ಗಾಯ

09:18 PM Apr 04, 2023 | Team Udayavani |

ಕಾರ್ಕಳ: ಮೂಡುಬಿದಿರೆ-ಕಾರ್ಕಳ ಹೆದ್ದಾರಿಯ ಸಾಣೂರು ಬಳಿಯ ಚಿಲಿಂಬಿಯಲ್ಲಿ ಕಾರೊಂದು ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಾದ ಮಿತ್ತಬೈಲು ನೆಲ್ಲಿಗುಡ್ಡೆ ನಿವಾಸಿ ಕೃಷ್ಣ ಗೌಡ ಹಾಗೂ ಪತ್ನಿ ಶಾಂತಾ ಗಾಯಗೊಂಡಿದ್ದಾರೆ.

Advertisement

ಕಾರು ಚಾಲಕ ಉಮರುಲ್‌ ಫಾರೂಕ್‌ ಅಜಾರೂಕತೆಯ ಚಾಲನೆಯಿಂದ ಅವಘಡ ಸಂಭವಿಸಿದ್ದು. ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಸಲಹೆಯಂತೆ ಶಾಂತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next