Advertisement

Shiggavi: ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲಿಯೇ ಇಬ್ಬರು ಸಾವು

08:14 PM Jul 13, 2024 | Team Udayavani |

ಹಾವೇರಿ: ಶಿಗ್ಗಾವಿ: ಹಾವೇರಿ ಜಿಲ್ಲೆ ಶಿಗ್ಗಾವಿ ಹೊರವಲಯದ ಸವಣೂರು ರಸ್ತೆಯಲ್ಲಿ ಶನಿವಾರ ಬೇವಿನ ಮರಕ್ಕೆ ಕಾರು ಢಿಕ್ಕಿಯಾಗಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ.

Advertisement

ಬೇವಿನಹಳ್ಳಿ ಗ್ರಾಮದ ನೀಲಪ್ಪ ಮೂಲಿಮನಿ (35), ಸುದೀಪ್‌ ಕೋಟಿ ಬೇವಿನಹಳ್ಳಿ (20) ಸ್ಥಳದಲ್ಲೇ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ಶಿವನಗೌಡ ಯಲ್ಲನಗೌಡ (20) ಮತ್ತು ಕಲ್ಮೇಶ್‌ ಮಾನೋಜಿ (26) ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃತಪಟ್ಟರು.

ಗಾಯಗೊಂಡ ಸಚಿನ್‌ ಎಮ್ಮಿ (21), ನಾಗಪ್ಪ ಎಮ್ಮಿ (26) ಮತ್ತು ವಿನಯ್‌ ನಾಗನೂರು (20) ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ 7 ಯುವಕರು ಬೆಳಗಾವಿಯತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಏಳು ಮಂದಿ ಯುವಕರು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ನಂದಗಡಕ್ಕೆ ಹೊರಟಿದ್ದರು. ವಾಹನ ಓವರ್ ಟೇಕ್ ಮಾಡಲು ಹೋದಾಗ ಅಪಘಾಥ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬೇವಿನಮರಕ್ಕೆ ಕಾರು ಢಿಕ್ಕಿ ಹೊಡೆದಿದೆ.

ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next