Advertisement

ಕಾರು-ಕ್ರೂಸರ್ ನಡುವೆ ಭೀಕರ ಅಪಘಾತ: ನಾಲ್ವರ ಸಾವು, 7 ಜನರಿಗೆ ಗಂಭೀರ ಗಾಯ

09:29 AM Sep 23, 2019 | Team Udayavani |

ಚಿತ್ರದುರ್ಗ: ಕಾರು ಮತ್ತು ಕ್ರೂಸರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಸಾವನ್ನಪ್ಪಿ, 7 ಜನ ಗಂಭೀರ ಗಾಯಗೊಂಡ ದುರ್ಘಟನೆ  ಹೊಸದುರ್ಗ ತಾಲೂಕಿನ ಕಲ್ಕೆರೆ ಎಂಬ ಗ್ರಾಮದಲ್ಲಿ ನಡೆದಿದೆ.

Advertisement

ಮೃತರನ್ನು ಗೌತಮ್ ಸಿಂಗ್ , ಮದನ್ ಸಿಂಗ್ , ಮುಖೇಶ್ ಸಿಂಗ್ , ಲೋಕೇಶ್ ಎಂದು ಗುರುತಿಸಲಾಗಿದದ್ದು, ಮೃತ ಲೋಕೇಶ್ ಹಾಸನ ಜಿಲ್ಲೆ ಅರಸಿಕೆರೆ ಮೂಲದವರು.

ಗಣೇಶೋತ್ಸವ ಸಮಾರಂಭಕ್ಕೆ ತೆರಳಿದ್ದ ಲೋಕೇಶ್ ಕ್ರೂಸರ್ ನಲ್ಲಿ ಮಧ್ಯರಾತ್ರಿ ವೇಳೆ ಹಿಂದಿರುಗುತ್ತಿದ್ದೆರು. ಈ ವೇಳೆ ಕಾರಿಗೆ ಮುಖಾಮುಖಿ ಅಪಘಾತವಾಗಿದ್ದು, ಕಾರಿನಲ್ಲಿದ್ದ ಮೂವರು ಸೇರಿ ಲೋಕೇಶ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಗಾಯಗೊಂಡವರನ್ನು ಹೊಸದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next