Advertisement

ಸುಳ್ಯದಲ್ಲಿ ಮರಕ್ಕೆ ಗುದ್ದಿ ಕಮರಿಗೆ ಉರುಳಿದ ಕಾರು

09:23 AM May 06, 2019 | Hari Prasad |

ಸುಳ್ಯ: ಇಲ್ಲಿನ ಆರಂಬೂರು ಎಂಬಲ್ಲಿ ಶನಿವಾರ ಮುಂಜಾನೆ ಕಾರೊಂದು ಕಮರಿಗೆ ಉರುಳಿಬಿದ್ದ ಘಟನೆ ವರದಿಯಾಗಿದೆ. ಅಪಘಾತಕ್ಕೀಡಾದ ಈ ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್‌ ಕಾರಿನಲ್ಲಿದ್ದವರೆಲ್ಲರೂ ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.

Advertisement

ನಝೀರ್‌ ಎಂಬವರ ಕುಟುಂಬ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಮಡಿಕೇರಿ ಮಾರ್ಗವಾಗಿ ಊರಿಗೆ ತೆರಳುತ್ತಿದ್ದಾಗ ಸುಳ್ಯದ ಬಳಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಲ್ಲುಗಳಿಗೆ ಮತ್ತು ಮರವೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಕಮರಿಗೆ ಉರುಳಿದೆ.

ಕಮರಿಗೆ ಉರುಳಿಬಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರನ್ನು ಚಲಾಯಿಸುತ್ತಿದ್ದ ನಝೀರ್‌ ಅವರ ಹಣೆಯ ಭಾಗಕ್ಕೆ ಗಾಯಗಳಾಗಿದ್ದು ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next