Advertisement

Road mishap: ಗುರುವಾಯನಕೆರೆ ಸಮೀಪ ಕಾರು ಅಪಘಾತ; ಓರ್ವ ಸಾವು, ಮತ್ತೋರ್ವ ಗಂಭೀರ

09:03 PM Mar 30, 2024 | Team Udayavani |

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪದ ಶಕ್ತಿನಗರದಲ್ಲಿ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮಾ. 29ರಂದು ಮಧ್ಯಾಹ್ನ ಸಂಭವಿಸಿದೆ.

Advertisement

ಲಾೖಲ ಮಾರ್ನಿಂಗ್‌ ಸ್ಟಾರ್‌ನಿವಾಸಿ ವಿ.ವಿ. ಮ್ಯಾಥ್ಯೂ ಅವರ ಪುತ್ರ ಪ್ರೈಸ್‌ ಮ್ಯಾಥ್ಯೂ (32) ಸಾವನ್ನಪ್ಪಿದ್ದು, ಸಹ ಪ್ರಯಾಣಿಕ ಧರ್ಮಸ್ಥಳ ನಾರ್ಯ ನಿವಾಸಿ ನಿತಿನ್‌ ಸಿ.ಆರ್‌. (28) ಮತ್ತು ಧರ್ಮಸ್ಥಳ ಗ್ರಾಮದ ಅರುಣ್‌ ಜೆ. (26) ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಬರುತ್ತಿದ್ದ ಕಾರು ಶಕ್ತಿನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಬರೆಗೆ ಢಿಕ್ಕಿ ಹೊಡೆದು ಮಗುಚಿತು.ಕಾರಿನಲ್ಲಿದ್ದ ಮೂವರನ್ನು ತತ್‌ಕ್ಷಣ ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ನಿತಿನ್‌ ಸಿ.ಆರ್‌. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಸ್ವರೂಪದ ಗಾಯಗೊಂಡ ಪ್ರ„ಸ್‌ ಅವರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿಮಧ್ಯೆ ಮೃತಪಟ್ಟರು. ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚರ್ಚ್‌ನಲ್ಲಿ ಪ್ರಾರ್ಥನೆ:

ಮೃತ ಪ್ರೈಸ್‌ ಮ್ಯಾಥ್ಯೂ ಉದ್ಯಮಿ ಬೆಳ್ತಂಗಡಿಯ ಹಾಗೂ ಉಜಿರೆಯಲ್ಲಿರುವ ರಬ್ಬರ್‌ ಇಂಡಿಯಾದ ಮಾಲಕರಾಗಿರುವ ವಿ.ವಿ. ಮ್ಯಾಥ್ಯೂ ಅವರ ಪುತ್ರ. ಮೃತರು ತಂದೆ, ತಾಯಿ, ಪತ್ನಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಇದೇ ಜನವರಿಯಲ್ಲಿ ಅವರ ವಿವಾಹ ನೆರವೇರಿತ್ತು. ಗುಡ್‌ ಫ್ರೆ„ಡೇಯಂದೇ ಮಗನ ಸಾವಿನ ಸುದ್ದಿ ಕೇಳಿ ಮನೆಮಂದಿ, ಕುಟುಂಬಸ್ಥರಿಗೆ ಆಘಾತವಾಗಿದೆ. ಶಾಸಕ ಹರೀಶ್‌ ಪೂಂಜ ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next