Advertisement

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದವರ ಕಾರು ಕೆರೆಗೆ: ಇಬ್ಬರು ಸಾವು

10:39 AM Nov 15, 2021 | Team Udayavani |

ಮುಂಡಗೋಡ:  ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು   ಬೆಂಗಳೂರಿನಿಂದ ಬರುತ್ತಿದ್ದ ವೇಳೆ ಪಟ್ಟಣದ ಅಮ್ಮಾಜಿ‌ ಕೆರೆಯಲ್ಲಿ ಕಾರು ಬಿದ್ದು ಇಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ರಾಜು ವರ್ಗೀಸ್ ಹಾಗೂ ಬ್ಲೆಸಿ ಮೃತಪಟ್ಟಿದ್ದಾರೆ. ಮೂಲತ: ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದವರಾಗಿದ್ದ ಇವರು ಬೆಂಗಳೂರಿನಲ್ಲಿ ನೆಲೆಸಿದ್ದರು.

ತಾಲೂಕಿನ ಕರವಳ್ಳಿಯಲ್ಲಿ ಸಂಬಂಧಿಯ ಅಂತ್ಯಕ್ರಿಯೆಗಾಗಿ ಬೆಂಗಳೂರನಿಂದ ಬರುತಿದ್ದ ವೇಳೆ ಸೋಮವಾರ ಮುಂಜಾನೆ ಸಮಯ ಚಾಲಕನ ನಿಯಂತ್ರಣ ತಪ್ಪಿ ಅಮ್ಮಾಜಿ ಕೆರೆಯ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಿಪಿಐ ಎಸ್.ಎಸ್ ಸಿಮಾನಿ, ಪಿಎಸ್ಐ ಎನ್.ಡಿ ಜಕ್ಕಣ್ಣ  ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿ ಶಾಮಕದಳದರು ಮೃತದೇಹವನ್ನು ಹೊರತೆಗೆಯಲಾಗಿದೆ. ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next