Advertisement

ಕಾರು ಅಪಘಾತ- ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಅಪಾಯದಿಂದ ಪಾರು

11:27 AM Dec 18, 2019 | Mithun PG |

ವಿಜಯಪುರ: ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ‌ಸಂಚರಿಸುತ್ತಿದ್ದ‌‌ ಕಾರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಬಳಿ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Advertisement

ಬುಧವಾರ ಜಿಲ್ಲೆಯ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಕಛೇರಿಯಲ್ಲಿ ವಿಧಾನಸಭಾ ಸಚಿವಾಲಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ  ಕಲ್ಯಾಣ ಸಮಿತಿ ಭೇಟಿ ನಡೆಯಲಿದ್ದವು. ಈ ಹಿನ್ನೆಲೆಯಲ್ಲಿ, ಸಮಿತಿ ಸದಸ್ಯರಾಗಿರುವ ಬಸವರಾಜ ಸಭೆಯಲ್ಲಿ ಪಾಲ್ಗೊಳ್ಳಲು ಆಲಮಟ್ಡಿಗೆ ತೆರಳುತ್ತಿದ್ದರು.

ಈ ವೇಳೆ ಗೊಳಸಂಗಿ ಬಳಿ ಏಕಮುಖ ದ್ವಿಪಥ‌ ರಾಷ್ಟ್ರೀಯ ಹೆದ್ದಾರಿ ಬಳಿ ಮುಂದೆ ಹೋಗುತ್ತಿದ್ದ ವಾಹನ ಹಿಂದಿಕ್ಕಲು ಶಾಸಕರ ಕಾರು ಚಾಲಕ ಮುಂದಾದಾಗ,‌ ಮುಂದಿನಿಂದ ಮತ್ತೊಂದು ವಾಹನ ಅಡ್ಡಬಂದಿದೆ. ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ‌ ಹೊಡೆದಿದೆ. ಕಾರು ಜಖಂಗೊಂಡರೂ ಶಾಸಕ ಬಸವರಾಜ ಹಾಗೂ ಶಾಸಕರ ಕಾರು‌ ಚಾಲಕನಿಗೆ ಯಾವುದೇ‌ ರೀತಿಯಲ್ಲಿ ಅಪಾಯ ಸಂಭವಿಸಿಲ್ಲ.

ಘಟನೆಯ ಬಳಿಕ ಶಾಸಕರು ಮತ್ತೊಂದು ಕಾರಿನಲ್ಲಿ ಆಲಮಟ್ಟಿ ಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next