Advertisement

ಕಾರು ಅಪಘಾತ: ಜಿಲ್ಲಾಧಿಕಾರಿ ಪಾರು

04:50 PM Oct 27, 2018 | |

ಚಿಕ್ಕಮಗಳೂರು: ದತ್ತಪೀಠಕ್ಕೆ ತೆರಳುತ್ತಿದ್ದ ವೇಳೆ ಜಿಲ್ಲಾಧಿಕಾರಿಗಳ ಕಾರು ಅಪಘಾತಕ್ಕೆ ಈಡಾಗಿದ್ದು, ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀರಾಮಸೇನೆ ವತಿಯಿಂದ ಅ.28ರಂದು ದತ್ತಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನದ
ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ದತೆ ಪರಿಶೀಲಿಸಲು ಶುಕ್ರವಾರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರುದತ್ತಪೀಠಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

Advertisement

ಅದೃಷ್ಟವಶಾತ್‌ ಜಿಲ್ಲಾಧಿಕಾರಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮುಳ್ಳಯ್ಯನಗಿರಿ ಮಾರ್ಗದ ಚನ್ನಗೊಂಡನಹಳ್ಳಿ ತಿರುವಿನಲ್ಲಿ ದತ್ತಪೀಠದಿಂದ ಬರುತ್ತಿದ್ದ ಹಾಸನ ಮೂಲದ ಪೊರ್ಡ್‌ ಐಕಾನ್‌ ಕಾರು ಹಾಗೂ ಜಿಲ್ಲಾಧಿಕಾರಿ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಜಿಲ್ಲಾಧಿಕಾರಿಗಳ ಕಾರಿನ ಬಂಪರ್‌ ಮತ್ತು ಇಂಡಿಕೇಟರ್‌ಗೆ ಹಾನಿಯಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ¨.

Advertisement

Udayavani is now on Telegram. Click here to join our channel and stay updated with the latest news.

Next