Advertisement

ಸೆರೆಯಾಯ್ತು ತಾಪಮಾನ ವೈಪರೀತ್ಯದ ಬೀಭತ್ಸ ದೃಶ್ಯ!

07:15 AM Dec 11, 2017 | Harsha Rao |

ವಾಷಿಂಗ್ಟನ್‌: ಸನ್ನಿವೇಶದ ಭೀಕರತೆಯನ್ನು ಹೇಳಲು ಒಂದು ಚಿತ್ರ ಸಾಕು. ಸೊಮಾಲಿಯಾದಲ್ಲಿನ ಬರ ಪರಿಸ್ಥಿತಿಯನ್ನು ಹಿಡಿದಿಟ್ಟಿದ್ದು, ನಿಶ್ಯಕ್ತ ದೇಹದ ಒಂದು ಚಿತ್ರ. ಕೆಲವು ವರ್ಷಗಳ ಹಿಂದೆ ಸಿರಿಯಾದಲ್ಲಿ ಯುದ್ಧ ಸನ್ನಿವೇಶದಲ್ಲಿ ಸಮುದ್ರದ ದಂಡೆಗೆ ತೇಲಿ ಬಂದ ಮಗುವೊಂದು ಯುದ್ಧದ ಬೀಭತ್ಸ ದೃಶ್ಯವನ್ನು ಸೆರೆಹಿಡಿದಿತ್ತು. ಇದೇ ರೀತಿಯ ಸನ್ನಿವೇಶ ಕೆನಡಿಯನ್‌ ಬಫಿನ್‌ ಐಲ್ಯಾಂಡ್‌ನ‌ಲ್ಲಿ ಸೆರೆಯಾಗಿದೆ. ಅತ್ಯಂತ ಕೃಶವಾಗಿ, ಆಹಾರವೂ ಸಿಗದ ಸ್ಥಿತಿಯಲ್ಲಿರುವ ಹಿಮಕರಡಿ ಜಾಗತಿಕ ತಾಪಮಾನ ಏರಿಕೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

Advertisement

ಫೋಟೋಗ್ರಾಫ‌ರ್‌ ಪಾಲ್‌ ನಿಕೆಲನ್‌ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಪಾಲ್‌ ಹಾಗೂ ಸೀ ಲೆಗಸಿ ಸಂಸ್ಥೆಯ ಇತರರು ಕೆನಡಿಯನ್‌ ದ್ವೀಪಕ್ಕೆ ತೆರಳಿದ್ದಾಗ ಈ ದೃಶ್ಯ ಕಂಡುಬಂದಿದೆ. ಬಿಳಿ ಕೂದಲನ್ನು ಇಳಿಬಿಟ್ಟುಕೊಂಡು, ಅತ್ಯಂತ ಕೃಶವಾದ ಮತ್ತು ಕಣ್ಣಿಂದ ನೀರು ಸುರಿಸುತ್ತಿರುವ ಹಿಮಕರಡಿಗಳು ಪಾಲ್‌ ಮತ್ತು ತಂಡದವರನ್ನು ನಿಬ್ಬೆರಗಾಗಿಸಿದೆ. ಸಾಮಾನ್ಯವಾಗಿ ಕೆನಡಾದಲ್ಲಿ ಬೆಳೆದ ನಾನು ದಷ್ಟಪುಷ್ಟವಾದ ಹಿಮಕರಡಿಗಳನ್ನು ನೋಡಿದ್ದೇನೆ. ಆದರೆ ಈ ದೃಶ್ಯ ನನ್ನ ಮನಸು ಕಲಕಿತು ಎಂದು ಪಾಲ್‌ ಹೇಳಿದ್ದಾರೆ.
ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮಕರಡಿಗಳು ಅವನತಿಯ ಅಂಚಿಗೆ ಸಾಗಲಿವೆ ಎಂದು ವಿಜ್ಞಾನಿಗಳು ಹಿಂದಿನಿಂದಲೂ ಹೇಳುತ್ತಿದ್ದಾರೆ. ಆದರೆ ಇದನ್ನು ಸಾಕ್ಷೀಕರಿಸುವಂತಹ ದೃಶ್ಯ ಇದಾಗಿದೆ. ಸಾಮಾನ್ಯವಾಗಿ ಹಿಮಕರಡಿಗಳಿಗೆ ಹಿಮದ ಗಡ್ಡೆಗಳ ಅಡಿಯಲ್ಲಿರುವ ಸೀಲ್‌ಗ‌ಳೇ ಆಹಾರ. ಆದರೆ ತಾಪಮಾನ ಹೆಚ್ಚುತ್ತಿರುವುದರಿಂದ ಹಿಮಗಡ್ಡೆಗಳು ಕರಗಿದ್ದು, ಸೀಲ್‌ಗ‌ಳು ಸಮುದ್ರದ ಮಧ್ಯಭಾಗಕ್ಕೆ ತೆರಳಿವೆ. ಹೀಗಾಗಿ ಹಿಮಕರಡಿಗಳಿಗೆ ಸೀಲ್‌ಗ‌ಳು ಸಿಗುತ್ತಿಲ್ಲ. ಇನ್ನೊಂದೆಡೆ ಹಿಮಕರಡಿಗಳು ಸೀಲ್‌ಗ‌ಳನ್ನು ಗುರುತಿಸಲು ಗಾಳಿಯನ್ನೇ ಬಳಸು ತ್ತವೆ. ಗಾಳಿಯಲ್ಲಿ ಬರುವ ಸೀಲ್‌ಗ‌ಳ ವಾಸನೆಯನ್ನು ಹಿಡಿದು ಅವುಗಳಿದ್ದಲ್ಲಿಗೆ ಹಿಮಕರಡಿಗಳು ದಾಳಿಯಿಡುತ್ತವೆ. ಆದರೆ ಈಗ ತಾಪಮಾನ ವೈಪರೀತ್ಯದಿಂದಾಗಿ ಗಾಳಿಯ ವೇಗ ಹೆಚ್ಚಿದ್ದು, ಸೀಲ್‌ಗ‌ಳ ಸುಳಿವೂ ಅವುಗಳಿಗೆ ಸಿಗುವುದಿಲ್ಲ ಎಂದು ಅಧ್ಯಯನವೊಂದರಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next