Advertisement

ಸೆಕ್ಯುರಿಟಿ ಗಾರ್ಡ್‌ ಹಂತಕನ ಸೆರೆ

11:23 AM Aug 02, 2017 | Team Udayavani |

ಮಹದೇವಪುರ: ಸೆಕ್ಯುರಿಟಿ ಗಾರ್ಡ್‌ಅನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಅರೋಪಿಯನ್ನು ಬೆಳಂದೂರು ಪೊಲೀಸರು ಬಂದಿಸುವಲ್ಲಿ ಯಶ್ವಿ‌ಸಿಯಾಗಿದ್ದಾರೆ.
ಅಸ್ಸಾಂ ಮೂಲದ ನೂಕ ರೇ ರೆಯ್ನಾಂಗ ಬಂಧಿತ ಆರೋಪಿ. ಬೆಳಂದೂರು ಸಮೀಪದ ಹರಳೂರು ರಸ್ತೆಯ ಲೇಕ್‌ ವ್ಯೂ ರೆಸಿಡೆನ್ಸಿಯಲ್‌ ಅಪಾರ್ಟಮೆಂಟ್‌  ಸೆಕ್ಯೂರಿಟಿ ಗಾರ್ಡ್‌ ಅಗಿದ್ದ ಹಸನ್‌ ಅಹ್ಮದ್‌ನನ್ನು ಆರೋಪಿ  ಜುಲೈ 25 ರಂದು ಕೊಲೆ ಮಾಡಿ ಪರಾರಿಯಾಗಿದ್ದ. 

Advertisement

ನೂಕ ರೇ ರೆಯ್ನಾಂಗ, ಮೃತ ಹಸನ್‌ ಅಹ್ಮದ್‌ ಹಾಗೂ ದೀಪಕ್‌ ಛತ್ರಿ ಎಂಬುವವರು ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು ಮೂವರು ಪ್ರತ್ಯೇಕ ವಾಗಿ ಕೆಲಸ ಮಾಡುತ್ತಿದರು. ಇದರ ನಡುವೆ ದೀಪಕ್‌ ಛತ್ರಿ ತನ್ನ ಕೆಲಸವನ್ನು ನೂಕ ರೇ ರೇಯ್ನಾಂಗ ಕೊಡಿಸಿ ಅಸ್ಸಾಂಗೆ ವಾಪಾಸು ಹೋಗಲು ನಿರ್ಧರಿಸಿದ್ದ. ಆದರೆ, ಮೃತ ಹಸನ್‌ ಅಹ್ಮದ್‌ ಕೂಡ ದೀಪಕ್‌ ಕೆಲಸದ ಮೇಲೆ ಕಣ್ಣು ಹಾಕಿದ್ದ.

ಇದೇ ವಿಚಾರವಾಗಿ ಹಸನ್‌ ಅಹ್ಮದ್‌ಗೆ ಕರೆ ಮಾಡಿದ್ದ ಆರೋಪಿ, ಧಮಕಿ ಹಾಕಿದ್ದ. ನೂಕ ರೇ ರೆಯ್ನಾಂಗ ಧಮಕಿಗೆ ಹೆದರದ ಹಸನ್‌ ಆಕ್ರೋಶ ವ್ಯಕ್ತಪಡಿಸಿದ್ದ. ಹೀಗಾಗಿ ಹಸ್‌ನ್‌ ಅಹ್ಮದ್‌ನನ್ನು ಕೊಲೆ ಮಾಡಿದ್ದ ಆರೋಪಿ ಅಸ್ಸಾಂ ತೆರಳಲು ಸಿದ್ದವಾಗಿದ್ದ. ಅರೋಪಿಯ ಜಾಡು ಹಿಡಿದ ಬೆಳ್ಳಂದೂರು ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶ್ವಿ‌ಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next