Advertisement

ಜೇಬುಗಳ್ಳನ ಸೆರೆ: ಮೊಬೈಲ್‌ ವಶ

03:00 PM Mar 26, 2022 | Team Udayavani |

ಶಹಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.19ರಂದು ತಾಲೂಕಿನ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಲು ಆಗಮಿಸಿದ್ದ ವೇಳೆ ಹೆಲಿಪ್ಯಾಡ್‌ನ‌ಲ್ಲಿ ಗದ್ದಲ ಉಂಟಾಗಿದ್ದ ಸಂದರ್ಭದಲ್ಲಿ ಹಲವರ ಮೊಬೈಲ್‌ ಮತ್ತು ಜೇಬು ಕತ್ತರಿಸಿ ದುಡ್ಡು ಹೊಡೆದ ಜೇಬುಗಳ್ಳನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಆರೋಪಿ ಶಹನವಾಜ್‌ ತಂದೆ ಮಹ್ಮದ್‌ ಅಲಿ ಸಾ. ಮಿಲ್ಲತ್‌ ನಗರ ಕಲ್ಬುರ್ಗಿ ಎಂಬಾತನನ್ನು ಬಂಧಿಸಿ ಆತನಿಂದ 4 ಮೊಬೈಲ್‌, 2500 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಹಾಪುರ ತಾಲೂಕಿನ ಗೋಲಗೇರಿ ಗ್ರಾಮದ ವೆಂಕಟೇಶ ತಂದೆ ಅಂಬಲಪ್ಪ ತಮ್ಮ ಜೇಬು ಕಳ್ಳತನವಾದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪಿಐ ಶ್ರೀನಿವಾಸ ಅಲ್ಲಾಪುರೆ ಮತ್ತು ಸಿಬ್ಬಂದಿ ಪ್ರಕರಣ ಪತ್ತೆ ಹಚ್ಚಿದ್ದು, ಜೇಬುಗಳ್ಳ ಶಹನವಾಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next