Advertisement

ರಾಯಣ್ಣ ಪ್ರತಿಮೆ ವಿರೂಪದ ಹಿಂದೆ ಎಂಇಎಸ್ ಕೈವಾಡವಿದೆಯೆಂದು ಹೇಳಲಾಗದು: ಡಿಕೆಶಿ

11:28 AM Dec 20, 2021 | Team Udayavani |

ಸುವರ್ಣ ಸೌಧ (ಬೆಳಗಾವಿ): ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಪ್ರಕರಣದ ಹಿಂದೆ ಎಂಇಎಸ್ ಇದೆ ಎಂದು ನಾನು ಹೇಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ನಾನು ಯಾಕೆ ಒಂದು ಸಂಸ್ಥೆಯ ಬಗ್ಗೆ ಮಾತನಾಡಲಿ. ಆ ಸಂಸ್ಥೆ ಬ್ಯಾನ್ ಮಾಡಿ ಎಂದು ನಾನು ಯಾಕೆ ಹೇಳಲಿ ಎಂದರು.

ಇದನ್ನೂ ಓದಿ:ಕನ್ನಡ ಬಾವುಟಕ್ಕೆ ಚಪ್ಪಲಿಯಿಂದ ಹೊಡೆದು ಸುಟ್ಟು ಹಾಕಿದ ಕಾಂಗ್ರೆಸ್ ಕಾರ್ಯಕರ್ತರು!

ಬಿಜೆಪಿ ಆರೋಪದ ಬಗ್ಗೆ ಮಾತನಾಡಿದ ಅವರು, ನನ್ನ ಹಿಂದೆ ಯಾರೋ ಬಂದರೆ ಅವನು ನನ್ನ ಬೆಂಬಲಿಗ ಎಂದು ತೋರಿಸುತ್ತಾರೆ. ನನ್ನ ಜತೆ ದಿನಾ ನೂರಾರು ಜನ ಫೋಟೋ ತೆಗೆದುಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next