Advertisement

ಜಾನುವಾರುಗಳ ಮೇವಾಯ್ತು ಕಬ್ಬು

06:40 AM Nov 24, 2018 | Team Udayavani |

ಸಿರಗುಪ್ಪ: ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವಿನ ಸಮಸ್ಯೆ ಬಗೆಹರಿಯುವ ಮುನ್ನವೇ ಬಳ್ಳಾರಿ ಜಿಲ್ಲೆಯಲ್ಲಿ ರೈತನೋರ್ವ ಬೆಳೆದ ಕಬ್ಬನ್ನೆಲ್ಲ ಕಡಿದು ಜಾನುವಾರುಗಳ ಮೇವಾಗಿ ಬಳಸಲು ಮುಂದಾಗಿದ್ದಾನೆ. ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರ ಗ್ರಾಮದ ರೈತ, ಸತ್ಯನಾರಾಯಣ ತಮ್ಮ ಹೊಲದಲ್ಲಿ ಬೆಳೆದ ಕಬ್ಬನ್ನೆಲ್ಲ ಕಟಾವು ಮಾಡಿ ದನ ಕರುಗಳಿಗೆ ಹಾಕುತ್ತಿದ್ದಾರೆ.

Advertisement

ದೇಶನೂರು ಗ್ರಾಮದಲ್ಲಿರುವ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಈ ವರ್ಷ ಕಬ್ಬು ಖರೀದಿ ಸ್ಥಗಿತಗೊಳಿಸಿದ್ದರಿಂದ ಇವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಸತ್ಯನಾರಾಯಣ 12 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಆದರೆ, ಕಬ್ಬು ಕಟಾವಿಗೆ ಬಂದ ನಂತರ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಖರೀದಿ ಸಾಧ್ಯವಿಲ್ಲ ಎಂದು ತಿಳಿಸಿದೆ. ಬೆಳೆದು ನಿಂತ ಕಬ್ಬನ್ನು ಜಮೀನಿನಲ್ಲಿ ಹಾಗೇ ಬಿಟ್ಟರೆ ಒಣಗುತ್ತದೆ.

ಅಲ್ಲದೆ, ಕಬ್ಬು ಕಟಾವು ಮಾಡದಿ ದ್ದರೆ ಬೇರೆ ಬೆಳೆ ಬೆಳೆಯಲೂ ಸಾಧ್ಯವಿಲ್ಲ. ಹೀಗಾಗಿ, ಕಬ್ಬನ್ನು ಕಟಾವು ಮಾಡಿ ತಮ್ಮ ಡೇರಿ ಫಾರಂನಲ್ಲಿನ ಆಕಳು,ಎಮ್ಮೆ, ಕರುಗಳಿಗೆ ಮೇವಾಗಿ ನೀಡುತ್ತಿದ್ದಾರೆ.

ಒಂದು ಎಕರೆ ಕಬ್ಬು ಬೆಳೆಯಲು 30 ರಿಂದ 50ಸಾವಿರ ರೂ.ಖರ್ಚು ಬಂದಿದೆ. ಅಲ್ಲದೆ,ಕಾರ್ಖಾನೆಯಿಂದ ಕಳೆದ ವರ್ಷದ ಕಬ್ಬಿನ ಬಾಕಿ 1ಲಕ್ಷ ರೂ.ಪಾವತಿಯಾಗಬೇಕಿದೆ. ಇದರೊಂದಿಗೆ ಕೊನೇ ಕ್ಷಣದಲ್ಲಿ ಕಬ್ಬು ಖರೀದಿ ಸ್ಥಗಿತಗೊಳಿಸಿದ್ದರಿಂದ ಈ ಭಾಗದ ರೈತರೆಲ್ಲ ನಷ್ಟ ಅನುಭವಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next