Advertisement

ಕೇಂದ್ರ ಸಚಿವ ಹೆಗಡೆ ಅನಾಗರಿಕ, ಅಸಂಸ್ಕೃತ ಮನುಷ್ಯ: ಸಿಎಂ ಕಿಡಿ

03:21 PM Nov 18, 2017 | Team Udayavani |

ದಾವಣಗೆರೆ : ಮುಂದಿನ ಜನವರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ, ಫೆಬ್ರವರಿ ತಿಂಗಳಿನಲ್ಲಿ ಚುನಾವಣಾ ಬಜೆಟ್‌ ಮಂಡಿಸುವುದಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ಶನಿವಾರ ಚೆನ್ನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಎಪ್ರಿಲ್‌ ,ಮೇ ನಲ್ಲಿ ಎಲೆಕ್ಷನ್‌ ಬರುತ್ತದೆ, ಹಾಗಾಗಿ ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸುತ್ತಿದ್ದೇನೆ. ಹೇಗಿದ್ದರೂ  ಅದು ಎಲೆಕ್ಷನ್‌ ಬಜೆಟ್‌ ಅಂತ ಕರೆಯುಲ್ಪಡುತ್ತದೆ’ಎಂದರು. 

‘ಜನವರಿಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತೇವೆ. ನಮ್ಮಲ್ಲಿ 224 ಅಲ್ಲ 480 ಕ್ಷೇತ್ರಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳಿದ್ದಾರೆ. ಬಿಜೆಪಿ ಅತ್ಯಂತ ದುರ್ಬಲ ಪಕ್ಷ ಅವರಿಗೆ ಸರಿಯಾಗಿ  ಅಭ್ಯರ್ಥಿಗಳೆ ಸಿಗುತ್ತಿಲ್ಲ’ ಎಂದು ಲೇವಡಿ ಮಾಡಿದರು. 

 ಹೆಗಡೆ ವಿರುದ್ಧ ಕಿಡಿ 

‘ವೋಟಿಗಾಗಿ ಯಾರ ಬೂಟೂ ನಕ್ಕುತ್ತಾರೆ’ ಎಂದು ತಮ್ಮ ವಿರುದ್ಧ ಟೀಕೆ ಮಾಡಿದ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಕಿಡಿ ಕಾರಿ ‘ಅವರ ಮಾತು ಕೇಳಿದರೆ ಏನು ಅನ್ಸುತ್ತೆ? ನಾಗರಿಕತೆ ಇಲ್ಲದ  ಅನಾಗರಿಕ, ಸಂಸ್ಕೃತಿಯೇ ಇಲ್ಲದ ಮನುಷ್ಯ,ಅದಕ್ಕಿಂತ ಹೆಚ್ಚು ನಾನೇನು ಹೇಳುವುದಿಲ್ಲ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next