Advertisement

3.30 ಲಕ್ಷ ಅಕ್ರಮ ಬಿಪಿಎಲ್‌ ಕಾರ್ಡ್‌ ರದ್ದು: ಹೊಸದಾಗಿ 2.70 ಲಕ್ಷ ಕಾರ್ಡ್‌ ಹಂಚಿಕೆ

01:03 AM Aug 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 3.30 ಲಕ್ಷ ಅಕ್ರಮ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

Advertisement

ರದ್ದುಪಡಿಸಿದ ಅಕ್ರಮ ಬಿಪಿಎಲ್‌ ಕಾರ್ಡ್‌ಗಳಲ್ಲಿ 85 ಸಾವಿರ ಆದಾಯ ತೆರಿಗೆ ಪಾವತಿದಾರರದು ಮತ್ತು 22 ಸಾವಿರ ಸರಕಾರಿ ನೌಕರರದು ಎಂದು ಸುದ್ದಿಗಾರ ರಿಗೆ ಅವರು ತಿಳಿಸಿದ್ದಾರೆ. 2.70 ಲಕ್ಷ ಕಾರ್ಡ್‌ ಹೊಸದಾಗಿ ನೀಡುತ್ತಿದ್ದೇವೆ. ಇನ್ನೂ 1.50 ಲಕ್ಷ ಮಂದಿ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಕೊರೊನಾ ಸಂದರ್ಭ ಆರಂಭಿಸಲಾದ ಕೇಂದ್ರದ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ 5 ಕೆ.ಜಿ. ಅಕ್ಕಿ ಉಚಿತ ವಿತರಣೆ ಸಪ್ಟೆಂಬರ್‌ನಿಂದ ಸ್ಥಗಿತ ಗೊಳ್ಳಲಿದೆ. ಸಬ್ಸಿಡಿ ಕಡಿತ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಭಿ ಪ್ರಾಯವನ್ನು ಕೇಂದ್ರ ಸರಕಾರ ಒಪ್ಪಿ ರಾಜ್ಯಗಳಿಗೆ ನಿರ್ದೇಶನ ನೀಡಿದರೆ ಅನ್ನಭಾಗ್ಯ, ಉಚಿತ ವಿದ್ಯುತ್‌ ಮತ್ತಿತರ ಯೋಜನೆಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.

ಕುಚ್ಚಲಕ್ಕಿ ಪೂರೈಕೆಗೆ ಅಡ್ಡಿ
ಕರಾವಳಿ ಭಾಗದವರಿಗೆ ಕುಚ್ಚಲಕ್ಕಿ ಒದಗಿಸುವ ಸಲುವಾಗಿ ಬೆಂಬಲ ಬೆಲೆ ನೀಡಿ ಅದನ್ನು ಖರೀದಿ ಸಲು ತೀರ್ಮಾನಿಸಿದ್ದೆವು. ಆದರೆ ಅಗತ್ಯ ಪ್ರಮಾಣ ದಲ್ಲಿ ನಮಗೆ ಲಭ್ಯವಾಗುತ್ತಿಲ್ಲ. ನಾವು ನಿಗದಿ ಪಡಿ ಸಿದ್ದಕ್ಕಿಂತ ಹೆಚ್ಚಿನ ದರವನ್ನು ಕೇರಳದಲ್ಲಿ ನೀಡು ತ್ತಿರು ವುದರಿಂದ ಕುಚ್ಚಲಕ್ಕಿ ಅಲ್ಲಿಗೆ ಪೂರೈಕೆಯಾಗುತ್ತಿದೆ ಎಂದು ಸಚಿವ ಕತ್ತಿ ತಿಳಿಸಿದರು.

ಹೊಸದಾಗಿ ಕಾರ್ಡ್‌ ನೀಡುವ ಬಗ್ಗೆ ಹಣಕಾಸು ಇಲಾಖೆಯ ಅನುಮತಿ ಕೇಳಿದ್ದೇವೆ. ಅವರು ಒಪ್ಪಿಗೆ ಕೊಟ್ಟ ಕೂಡಲೇ ಕಾರ್ಡ್‌ ವಿತರಿಸುತ್ತೇವೆ. ಒಂದು ಬಿಪಿಎಲ್‌ ಕಾರ್ಡ್‌ಗೆ ಆಹಾರ ಧಾನ್ಯ ಒದಗಿಸಲು ರಾಜ್ಯ ಸರಕಾರ 550 ರೂ. ವೆಚ್ಚ ಮಾಡುತ್ತಿದೆ.
– ಉಮೇಶ್‌ ಕತ್ತಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next