Advertisement

ತೆರಿಗೆ ವಿನಾಯಿತಿ ಆದೇಶ ರದ್ದು

06:35 AM Mar 22, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಘಟಕಗಳಿಗೆ 10 ವರ್ಷಗಳ ಅವಧಿಗೆ ನೀಡಿದ್ದ ತೆರಿಗೆ ವಿನಾಯಿತಿಗಳನ್ನು ವಾಪಸ್‌ ಪಡೆದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೊರಡಿಸಿದ್ದ ಆದೇಶವನ್ನು  ಹೈಕೋರ್ಟ್‌ ರದ್ದುಗೊಳಿಸಿದೆ.

Advertisement

ಕುರಿತಂತೆ ಕೆಲವು ಸೌರ, ಪವನ ಹಾಗೂ ಕಿರು ಜನ ವಿದ್ಯುತ್‌ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಎಸ್‌.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವ ಆದೇಶ ನೀಡಿದೆ. ನವದೆಹಲಿಯ ರಿನಿವ್ಯೂ ಪವರ್‌ ಲಿಮಿಟೆಡ್‌ ಮತ್ತಿತರ ಸೌರ, ಪವನ ಹಾಗೂ ಕಿರು ಜಲವಿದ್ಯುತ್‌ ಘಟಕ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಎಸ್‌.ಸುಜಾತ ಅವರಿದ್ದ ಏಕಸದಸ್ಯಪೀಠ ಇತ್ತೀಚೆಗೆ ಈ ಮಹತ್ವದ ಆದೇಶ ನೀಡಿದೆ.

ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಮುಂದೆ ಬರುವ ಕಂಪೆನಿಗಳಿಗೆ ಕೆಲವೊಂದು ತೆರಿಗೆ ವಿನಾಯ್ತಿಗಳನ್ನು ರಾಜ್ಯ ಸರ್ಕಾರ ಘೋಷಿಸಿತ್ತು.

ಆದರೆ, 2013ರ ಎ.1ರಿಂದ 2018ರ ಮಾ.31ರ ಅವಧಿಯಲ್ಲಿ ಆರಂಭವಾದ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ನೀಡಿದ್ದ ತೆರಿಗೆ ವಿನಾಯ್ತಿಯನ್ನು ವಾಪಸ್‌ ಪಡೆದು 2018ರ ಮೇ 14ರಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣಾ ಆಯೋಗ ಆದೇಶಿತ್ತು. ಇದನ್ನು ಪ್ರಶ್ನಿಸಿ ಕಂಪೆನಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next