Advertisement

ಕೋವಿಡ್ 2ನೇ ಅಲೆ: ಜಾತ್ರಾ ಕಾರ್ಯಕ್ರಮ ರದ್ದು

03:17 PM Apr 23, 2021 | Team Udayavani |

ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯದಕ್ಷಿಣಕಾಶಿ ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಏ.27, 28ಹಾಗೂ 29 ರಂದು ನಡೆಯಬೇಕಿದ್ದ ಶ್ರೀಹೊನ್ನಾದೇವಿ ಆರತಿ,ಮಡೆ, ಜಾತ್ರಾ ಮಹೋತ್ಸವ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ, ಮುಂದಿನ ದಿನಗಳಲ್ಲಿ ಬೇರೆ ದಿನಾಂಕವನ್ನುನಿಗದಿಪಡಿಸಲಾಗುವುದು ಎಂದುಹೊನ್ನಮ್ಮಗವಿ ಮಠಾಧ್ಯಕ್ಷರಾದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಏ.27, 28, 29 ರಂದುನಡೆಯಬೇಕಿದ್ದ ಕಾರ್ಯಕ್ರಮಕ್ಕೆಈಗಾಗಲೇ ಎಲ್ಲಾ ಸಿದ್ದತೆಗಳನ್ನುಮಾಡಿಕೊಂಡು ಮಠಾಧೀಶರು, ರಾಜಕೀಯ ಮುಖಂಡರು,ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಆದರೆ ಸರ್ಕಾರದಆದೇಶ ಹಾಗೂ ಭಕ್ತಾದಿಗಳ ಹಿತದೃಷ್ಟಿಯಿಂದಮುಂದೂಡಬೇಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next