Advertisement

‘ಮಹಾ’ಮಳೆ: ಮುಂಬೈಯ ವಿಶ್ವ ತುಳು ಹಬ್ಬ ‘ಬೊಂಬಾಯಿಡ್ ತುಳುನಾಡ್’ರದ್ದು

09:30 AM Nov 09, 2019 | keerthan |

ಮುಂಬೈ: ಮುಂಬೈನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣದಿಂದ ಶುಕ್ರವಾರದಿಂದ ಆರಂಭವಾಗಬೇಕಿದ್ದ ‘’ವಿಶ್ವ ತುಳು ಹಬ್ಬ’’ ರದ್ದಾಗಿದೆ.

Advertisement

ಕಳೆದ ರಾತ್ರಿಯಿಂದ ಬಿಡದೇ ಮಳೆ ಸುರಿಯುತ್ತಿರುವ ಕಾರಣ ಅನಿವಾರ್ಯವಾಗಿ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಆಯೋಜಕ ಕಲಾ ಜಗತ್ತು, ಮುಂಬೈ ಇದರ ವಿಜಯ್ ಕುಮಾರ್ ಶೆಟ್ಟಿ ಹೇಳಿದರು.

ಕಾಂದಿವಿಲಿಯ ಪೊಯ್ಸರ್ ಜಿಮ್ಖಾನಾ ಬಳಿಯ ಸಪ್ತಾಹ ಮೈದಾನದಲ್ಲಿ ಕಾರ್ಯಾಕ್ರಮಕ್ಕಾಗಿ ಎಲ್ಲಾ ಸಿದ್ದತೆಗಳು ನಡೆದಿದ್ದು, ಆದರೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲವೂ ವ್ಯರ್ಥವಾಗಿದೆ.

ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ಸ್ಪಷ್ಟಪಡಿಸಿದ್ಧಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next