Advertisement

23ರವರೆಗೆ ಕೆನರಾ ಉತ್ಸವ

01:40 AM Feb 21, 2019 | |

ಬೆಂಗಳೂರು: ಬನಶಂಕರಿ 2ನೇ ಹಂತದ ಸೇವಾಕ್ಷೇತ್ರ ಆಸ್ಪತ್ರೆಯ ಮಾತೃಛಾಯ ಆವರಣದಲ್ಲಿ ಕೆನರಾ
ಬ್ಯಾಂಕ್‌ ಕೇಂದ್ರ ಕಚೇರಿಯ ಮಹಿಳಾ ಸಬಲೀಕರಣ ವಿಭಾಗ ಹಾಗೂ ಕೆನರಾ ರಿಲೀಫ್‌ ಆ್ಯಂಡ್‌ ವೆಲ್‌ ಫೇರ್‌ ಸೊಸೈಟಿ ಸಹಯೋಗದಲ್ಲಿ ಫೆ.23 ರವರೆಗೆ ಕರಕುಶಲ ವಸ್ತುಗಳ ಮಾರಾಟ ಮೇಳ “ಕೆನರಾ ಉತ್ಸವ’ ಆಯೋಜಿಸಲಾಗಿದೆ.

Advertisement

ಉತ್ಸವವನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈ ಅವರು ಮಂಗಳವಾರ ಉದ್ಘಾಟಿಸಿ, ಮಹಿಳಾ ಉದ್ಯಮಿಗಳ ಕಲೆಗಾರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆನರಾ ಬ್ಯಾಂಕ್‌ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲ ರೀತಿ ಸಹಕಾರ ನೀಡಲಿದೆ ಎಂದರು.

ನಂತರ ಮಾರಾಟ ಮಳಿಗೆಗಳಿಗೆ ಭೇಟಿ ಕೊಟ್ಟು ಪ್ರದರ್ಶನಗೊಂಡಿರುವ ವಸ್ತ್ರಗಳು, ಆಭರಣಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಸಿಎಂಡಿ ಆರ್‌.ವಿ. ಶಾಸ್ತ್ರೀ, ಸಿಆರ್‌ಡಬುÉಎಸ್‌ ಗೌ.ಕಾರ್ಯದರ್ಶಿ ಪಿ. ಅರವಿಂದ ರಾವ್‌, ಜಂಟಿ ರ್ಯದರ್ಶಿ ಪ್ರೇಮಾ ರತ್ನಾಕರ್‌, ಜನರಲ್‌ ಮ್ಯಾನೇಜರ್‌ ಕೆ.ಎಸ್‌.ಎಸ್‌. ಕಾಮತ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next