Advertisement

Canada: ದೇಗುಲಗಳ ಮೇಲಿನ ದಾಳಿಗೆ ಸಂಸದ ಚಂದ್ರ ಆರ್ಯ ಕಿಡಿ

01:09 AM Nov 22, 2023 | Team Udayavani |

ಟೊರೆಂಟೊ: ಕೆನಾಡದಲ್ಲಿರುವ ಹಿಂದೂಗಳನ್ನು ಗುರಿಯಾಗಿಸಿ ನಡೆಸುತ್ತಿರುವ ದ್ವೇಷದ ಕೃತ್ಯಗಳು, ಮಂದಿರ ಧ್ವಂಸದಂಥ ಕಾರ್ಯಗಳನ್ನು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಆಕ್ಷೇಪಿಸಿದ್ದು, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರ ನೇತೃತ್ವದ ಸರಕಾರ ಇನ್ನಾದರೂ ಹೆಜ್ಜೆ ಮುಂದಿಟ್ಟು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ನವೆಂಬರ್‌ 26ರಂದು ಸರ್ರೆನಲ್ಲಿರುವ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಖಲಿಸ್ಥಾನಿ ಪರ ಗುಂಪು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೇ ಆರ್ಯ ಅವರು ಎಕ್ಸ್‌ನಲ್ಲಿ ಈ ಕುರಿತು ಪ್ರಸ್ತಾವಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೋಸ್ಟ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ಸಿಕ್ಖ್ ಗುರುದ್ವಾರದ ಹೊರಗೆ ಸಿಕ್ಖ್ ಕುಟುಂಬವೊಂದನ್ನು ಖಲಿಸ್ಥಾನಿ ಪರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು. ಇದೀಗ ಮಂದಿರದಲ್ಲಿ ಪ್ರತಿಭಟಿಸುವ ಬೆದರಿಕೆ ಹಾಕಿದೆ. ಕೆನಡಾದಲ್ಲಿರುವ ದೇವಾಲಯಗಳಿಗೆ ಅಪಾಯ ಎದುರಾಗಿದೆ. ಇವೆಲ್ಲವನ್ನೂ ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಸಲಾಗುತ್ತಿದ್ದು, ಸಾರ್ವಜನಿಕವಾಗಿಯೇ ಹಿಂದೂಗಳ ಮೇಲೆ, ದೇಗುಲಗಳ ಮೇಲೆ ನಡೆಯುತ್ತಿರುವ ಈ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next