Advertisement

ತಕ್ಷಣವೇ ರಾಜೀನಾಮೆ ಸಾಧ್ಯವೇ?

01:43 AM May 25, 2019 | Team Udayavani |

ಹಾಸನ: ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ 24 ಗಂಟೆಯೊಳಗೆ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ರೇವಣ್ಣ ಅವರು ಪ್ರಕಟಿಸಿದ್ದಾರೆ. ಆದರೆ, ಅವರು ತಕ್ಷಣವೇ ರಾಜೀನಾಮೆ ನೀಡಲು ಸಾಧ್ಯವೇ?. ಒಂದು ವೇಳೆ ರಾಜೀನಾಮೆ ನೀಡುವುದಾದರೆ ಅವರು ಯಾರಿಗೆ ರಾಜೀನಾಮೆ ನೀಡಬೇಕು?. ಚುನಾವಣಾ ಆಯೋಗಕ್ಕೆ ನೀಡಬಹುದೇ?. ಅದರ ಅಂಗೀಕಾರ ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಎದುರಾಗಿವೆ.


Advertisement

ಕಾನೂನು ತಜ್ಞರ ಪ್ರಕಾರ, ಸಂಸದರು ಲೋಕಸಭೆಯ ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು. ಸಕಾರಣಗಳನ್ನು ಆಧರಿಸಿ ಸ್ಪೀಕರ್‌ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ. ಆದರೆ, ಈಗ ಪ್ರಜ್ವಲ್ ರೇವಣ್ಣ ಇನ್ನೂ ಸಂಸದ ರಲ್ಲ. ಲೋಕಸಭಾ ಚುನಾವಣೆಯ ವಿಜೇತ ಅಭ್ಯರ್ಥಿ ಅಷ್ಟೇ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಹೆಸರನ್ನು ರಾಜ್ಯಪತ್ರ (ಗೆಜೆಟ್) ದಲ್ಲಿ ಪ್ರಕಟಿಸಿದ ನಂತರ, ಹೊಸ ಲೋಕಸಭೆ ಅಸ್ತಿತ್ವಕ್ಕೆ ಬಂದು, ಸ್ಪೀಕರ್‌ ಆಯ್ಕೆಯಾಗಬೇಕು. ನಂತರ ನೂತನ ಲೋಕಸಭಾ ಸದಸ್ಯರು ಸ್ಪೀಕರ್‌ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು. ನಂತರ ಅವರು ಸಂಸದರಾಗುತ್ತಾರೆ. ನಂತರ ಯಾವ ಕ್ಷಣದಲ್ಲಿ ಬೇಕಾದರೂ ಸಂಸದರು ರಾಜೀನಾಮೆ ನೀಡಬಹುದು.

ಲೋಕಸಭೆ ಅಸ್ತಿತ್ವಕ್ಕೆ ಬರುವ ಮೊದಲು ಚುನಾವಣಾ ಆಯೋಗಕ್ಕೆ ರಾಜೀನಾಮೆ ನೀಡಲು ಸಾಧ್ಯವಿಲ್ಲ. ಸದಸ್ಯರ ಆಯ್ಕೆಯ ಅಧಿ ಕಾರವಷ್ಟೇ ಆಯೋಗಕ್ಕಿರುವುದು. ಹಾಗಾದರೆ, ಪ್ರಜ್ವಲ್ ಈಗಲೇ ರಾಜೀನಾಮೆ ನೀಡಲು ಹೇಗೆ ಸಾಧ್ಯ ಎಂಬ ಜಿಜ್ಞಾಸೆ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next