Advertisement

ChatGPT ಮನುಷ್ಯನಿಗೆ ಪರ್ಯಾಯವಲ್ಲ: ಇನ್ಫೋಸಿಸ್‌ ಸಹ ಸಂಸ್ಥಾಪಕ

10:35 PM Apr 21, 2023 | Team Udayavani |

ನವದೆಹಲಿ: ಚಾಟ್‌ಜಿಪಿಟಿಯಿಂದ ಮಾನವರ ಉದ್ಯೋಗಕ್ಕೆ ಕುತ್ತು ಬರಲಾರದು ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ಡಾ.ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದ್ದಾರೆ.

Advertisement

“ಸಿಎನ್‌ಬಿಸಿ’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಚಾಟ್‌ಜಿಪಿಟಿ ಎಂದಿಗೂ ಮನುಷ್ಯನ ಮನಸ್ಸಿಗೆ ಪರ್ಯಾಯ ವಾಗಲು ಸಾಧ್ಯವಿಲ್ಲ. ಅದರಿಂದ ಕೆಲಸದ ಗುಣಮಟ್ಟ ಹೆಚ್ಚಬಹುದು. ಆದರೆ ಮನುಷ್ಯನಿಗೆ ಪರ್ಯಾಯ ವಾಗಲು ಸಾಧ್ಯವಿಲ್ಲ. ಸೋಮಾರಿಗಳು ಸಿ ದರ್ಜೆ ಪಡೆಯುತ್ತಾರೆ, ಬುದ್ಧಿವಂತರು ಎ ದರ್ಜೆ ಪಡೆಯು ತ್ತಾರೆ,’ ಎಂದರು.

“ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿರುತ್ತಾರೆ. ಪ್ರತಿಯೊಬ್ಬರೂ ತಮಗೆ ಅನುಕೂಲವಾಗುವಂತೆ ಚ್ಯಾಟ್‌ಜಿಪಿಟಿಯನ್ನು ಬಳಸುತ್ತಾರೆ. ಹಾಗಾಗಿ ತನಗೆ ಜಿಪಿಟಿಯ ಬಗ್ಗೆ ಯಾವುದೇ ಆತಂಕವಿಲ್ಲ,’ ಎಂದು ಹೇಳಿದ್ದಾರೆ. ಹೊಸ ತಂತ್ರಜ್ಞಾನದಿಂದ ಜಗತ್ತಿನಾದ್ಯಂತ ಹಲವು ಕ್ಷೇತ್ರಗಳ ಉದ್ಯೋಗಗಳು ನಷ್ಟವಾಗಲಿದೆ ಎಂಬ ಆತಂಕದ ನಡುವೆಯೇ ಈ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next