Advertisement
ಅಂದು ಬೆಳಗ್ಗೆ ಐದು ಗಂಟೆಗೆ ಎದ್ದು ಕಾತರದಿಂದ ಹೊರಡಲನುವಾಗಿದ್ದೆ. ಮನೆಯಿಂದ ದೂರದ ಅಲೆವೂರಿನ ಗುಡ್ಡೆಯಂಗಡಿಗೆ ! ಈ ವರ್ಷದ ನಮ್ಮ ಶಿಬಿರ ಅಲ್ಲಿಯೇ ನಡೆದದ್ದು. ಬೆಳಗೆ ಸುಮಾರು 9 ಗಂಟೆ ಹೊತ್ತಿಗೆ ಎಲ್ಲ ಶಿಬಿರಾರ್ಥಿಗಳು ಜಮಾಯಿಸಿದ್ದರು. ಎಲ್ಲರಿಗೂ ಕುತೂಹಲ. ವೈಜ್ಞಾನಿಕ ಮನೋಧರ್ಮ ಮತ್ತು ಯುವಜನತೆ ಎಂಬುದು ನಮ್ಮ ಶಿಬಿರದ ಧ್ಯೇಯವಾಕ್ಯವಾಗಿತ್ತು. ಎಲ್ಲ ಶಿಬಿರಾರ್ಥಿಗಳು ಬಂದ ನಂತರ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಮೊದಲ ದಿನ ಯಾರ ಪರಿಚಯವೂ ಇಲ್ಲ- ನಮ್ಮ ನಮ್ಮ ಸ್ನೇಹಿತರನ್ನು ಹೊರತುಪಡಿಸಿ.
Related Articles
Advertisement
ಇಷ್ಟಾಗುವಾಗ ಹೊಟ್ಟೆ ತುಂಬಾ ಹಸಿವಾಗುತ್ತಿತ್ತು. ಬೇಗ ಬೇಗನೆ ಎಲ್ಲರೂ ಊಟದ ಮನೆಯನ್ನು ಸೇರಿದೆವು. ಸ್ನಾನ, ಊಟ, ಶ್ರಮದಾನ ಎಲ್ಲಕೂ ಒಂದೊಂದು ಸಮಯ ನಿಗದಿಯಾಗಿತ್ತು. ಈ ಸಮಯವನ್ನು ನಾವು ಸರಿಯಾಗಿ ಪಾಲನೆ ಮಾಡಬೇಕಿತ್ತು. ಮಧ್ಯಾಹ್ನ ಊಟದ ನಂತರ ಶೈಕ್ಷಣಿಕ ಕಾರ್ಯಕ್ರಮಗಳು ಜರಗುತ್ತಿದ್ದವು. ಶೈಕ್ಷಣಿಕ ತಂಡದವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಹಾಗೆಯೇ ನಮ್ಮನ್ನು ಚೇತನಗೊಳಿಸಲು ಹಿರಿಯ ವಿದ್ಯಾರ್ಥಿಗಳು ಮನೋರಂಜನಾ ಆಟಗಳನ್ನು ನಮಗೆ ಆಡಿಸುತ್ತಿದ್ದರು.
ಸಂಜೆ ಧ್ವಜಾವರೋಹಣ ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿ¨ªೆವು. ಸಾಂಸ್ಕೃತಿಕ ವಿಭಾಗದ ಜವಾಬ್ದಾರಿಯನ್ನು ಹೊತ್ತ ತಂಡವು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಡುತ್ತಿತ್ತು. ಅದುವರೆಗೆ ವೇದಿಕೆಗಳನ್ನು ಹತ್ತದವರಿಗೆ ಅದೊಂದು ಸುಂದರ ಅವಕಾಶ. ನಮ್ಮ ಸಂತೋಷದ ಕ್ಷಣಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೂ ಉಪಸ್ಥಿತರಿರುತ್ತಿದ್ದರು. ತದನಂತರ ರಾತ್ರಿಯ ಊಟವನ್ನು ಮುಗಿಸಿ ದಿನಚರಿಯನ್ನು ಓದುವ ಅವಲೋಕನದ ಹೊತ್ತು. ನಾವು ಮಾಡಿದ ಸರಿ-ತಪ್ಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೆವು. ಅವಲೋಕನದ ನಂತರ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ನಿದ್ರೆಗೆ ಜಾರುತ್ತಿದ್ದೆವು.
ದಿನಗಳು ಕಳೆದ ಹಾಗೆ ಎಲ್ಲರು ಒಂದೇ ಕುಟುಂಬದ ಸದಸ್ಯರ ಹಾಗೆ ಆತ್ಮೀಯರಾದೆವು. ದಿನಗಳು ಕಳೆದವು. ಇಷ್ಟು ದಿನದ ನಗು, ಅಳು, ದ್ವೇಷ, ಗೆಳೆತನ, ಊಟ, ವೇದಿಕೆ, ತಮಾಷೆ, ಆಟ-ಪಾಠಗಳು, ಹಿರಿ-ಕಿರಿಯದರ ಜೊತೆಗಿನ ತರಲೆ-ತುಂಟಾಟಗಳನ್ನು ಹೇಳಿದಷ್ಟೂ ಮುಗಿಯುವುದಿಲ್ಲ.
ಶಿಬಿರದ ಕೊನೆಯ ಹಿಂದಿನ ದಿನದ ಅವಲೋಕನದಲ್ಲಿ ಭಾರತದ ಭೂಪಟದ ಚಿತ್ರವನ್ನು ಬಿಡಿಸಿ ಅದಕ್ಕೆ ಜ್ಯೋತಿಯನ್ನು ಅರ್ಪಿಸುವ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವರಿಗೆ ಧನ್ಯವಾದ ಹೇಳಿದೆವು. ಕ್ಷಮೆ ಕೇಳಿದೆವು, ಕ್ಷಮಿಸಿದೆವು.
ಕೊನೆಯ ರಾತ್ರಿ. ಹಗಲಿನ ಕೆಲಸಗಳಿಂದ ದಣಿದಿದ್ದರೂ ನಿದ್ದೆ ಬರುತ್ತಿರಲಿಲ್ಲ. ಕಣ್ಣುಗಳಲ್ಲಿ ನೀರು- ನಾಳೆ ಬಿಟ್ಟು ಹೋಗಬೇಕೆಂಬ ಬೇಸರ.
ಬೇಡವೆಂದರೂ ಶಿಬಿರದ ಕೊನೆಯ ದಿನ ಬಂದೇಬಿಟ್ಟಿತ್ತು. ಪರಸ್ಪರ “ಬಾಯ್’ ಎನ್ನಲು ದನಿಯೇ ಬರುತ್ತಿರಲಿಲ್ಲ.
ರಮ್ಯಾ ಬಿ.ದ್ವಿತೀಯ ಬಿ. ಎ. ಎಂಜಿಎಂ ಕಾಲೇಜು, ಉಡುಪಿ