Advertisement

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

12:20 AM Jun 25, 2024 | Team Udayavani |

ಸಿದ್ದಾಪುರ: ಶಂಕರನಾರಾಯಣ ಪೊಲೀಸ್‌ ಠಾಣೆಯ ಅನತಿ ದೂರದ ಸರ್ಕಲ್‌ ಬಳಿ ಮಲಗಿದ್ದ ದನವನ್ನು ಕಳ್ಳರು ಸೋಮವಾರ ಬೆಳಗಿನ ಜಾವದಲ್ಲಿ ಐಶಾರಾಮಿ ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋದ ಘಟನೆಯು ಸ್ಥಳೀಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

Advertisement

ಮೂರ್‍ನಾಲ್ಕು ಮಂದಿ ಇದ್ದ ದನ ಕಳ್ಳರು ಐಶಾರಾಮಿ ಕಾರಿನಲ್ಲಿ ಬಂದು ಮಲಗಿದ್ದ ದನವನ್ನು ಕಾರಿನ ಹತ್ತಿರಕ್ಕೆ ಎಳೆದು ತಂದು ಎತ್ತಿ ಕಾರಿನೊಳಕ್ಕೆ ತಳ್ಳುತ್ತಾರೆ. ಪಕ್ಕದಲ್ಲಿ ಇರುವ ಉಳಿದ ದನಗಳು ಪ್ರತಿರೋಧ ವ್ಯಕ್ತಪಡಿಸಿದರೂ, ದುಷ್ಕರ್ಮಿಗಳು ಮತ್ತೂಂದು ದನವನ್ನು ಕಳವು ಮಾಡಲು ಯತ್ನಿಸಿದ್ದಾರೆ.

ಬಸ್‌ ನಿಲ್ದಾಣದ ಬಳಿ ಇದ್ದ ಬೀಟ್‌ ಪೊಲೀಸರು ಓಡಿ ಬಂದಾಗ ತಾವು ಬಂದ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಓಡಿ ಬಂದ ಬೀಟ್‌ ಪೊಲೀಸ್‌ ಒಬ್ಬರು ದನ ಕಳ್ಳರನ್ನು ಹಿಡಿಯಲೆತ್ನಿಸಿದ್ದಾಗ, ದನ ಕಳ್ಳರು ಒಮ್ಮೆಲೆ ಕಾರನ್ನು ಮೈಮೇಲೆ ಚಲಾಯಿಸಲು ಯತ್ನಿಸಿದ್ದಾರೆ. ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೊಲೀಸರು ಬಂದ ಪರಿಣಾಮ ಉಳಿದ ದನಗಳು ಅಪಾಯದಿಂದ ಪಾರಾದವು.

 

Advertisement

Udayavani is now on Telegram. Click here to join our channel and stay updated with the latest news.

Next