Advertisement
ನಗರದ ಉಪ್ಪಾರ ಬೀದಿ 2ನೇ ಕ್ರಾಸ್ ನಿವಾಸಿ ಮೋಹನ್ ಕುಮಾರ್ ಅಲಿಯಾಸ್ ಕುಮಾರ್ (32) ಬಂಧಿತ. ಈತ ಕಂಬಿ ಕಟ್ಟುವ ಕೆಲಸ ಮಾಡುತ್ತಾನೆ. ಚಾಮರಾಜೇಶ್ವರ ದೇವಾಲಯದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಶಿಥಿಲವಾಗಿರುವ ದೊಡ್ಡ ರಥವನ್ನೂ ಹೊಸದಾಗಿ ನಿರ್ಮಿಸಲಿ ಎಂಬ ಉದ್ದೇಶದಿಂದ ರಥಕ್ಕೆ ಬೆಂಕಿ ಹಚ್ಚಿದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಎಸ್ಪಿ ಕುಲದೀಪಕುಮಾರ್ ಜೈನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಆರೋಪಿ ಕುಮಾರ್ ಪತ್ತೆಯಾಗಿದ್ದು ಹೀಗೆ ರಥ ನಿಲ್ಲಿಸಿದ್ದ ಸುತ್ತಮುತ್ತಲ ಕಟ್ಟಡಗಳಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದರು. ರಥದ ಪಕ್ಕದಲ್ಲೇ ರಾಷ್ಟ್ರೀಯ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ಗಳಿದ್ದು, ಅವುಗಳ ಮುಂದೆ ಅಳವಡಿಸಿರುವ ಸಿಸಿಟೀವಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಅದರಲ್ಲಿ ಶನಿವಾರ ಮಧ್ಯರಾತ್ರಿ 1.10ರ ಸಮಯದಲ್ಲಿ ಬಣ್ಣದ ಪಂಚೆ ಧರಿಸಿದ ವ್ಯಕ್ತಿ ರಥ ನಿಲ್ಲಿಸಿರುವ ಜಾಗಕ್ಕೆ ಹೋಗುವ ದೃಶ್ಯ ದಾಖಲಾಗಿತ್ತು. ಇದರಲ್ಲಿ ವ್ಯಕ್ತಿಯ ಬೆನ್ನು ಮಾತ್ರ ಕಾಣುತ್ತಿತ್ತು. ಇದಕ್ಕೂ 10ರಿಂದ 15 ನಿಮಿಷ ಮುಂಚೆ ಇದೇ ವ್ಯಕ್ತಿ ನಗರದ ಸಂತೆಮರಹಳ್ಳಿ ವೃತ್ತ ದಾಟುತ್ತಿರುವುದು ಅಲ್ಲಿ ಪೊಲೀಸರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಅಲ್ಲದೇ ಘಟನೆ ನಡೆದ 4-5 ನಿಮಿಷಗಳ ಬಳಿಕ ಇದೇ ವ್ಯಕ್ತಿ ಭುವನೇಶ್ವರಿ ವೃತ್ತದಲ್ಲಿ ಆಟೋ ಚಾಲಕನೊಬ್ಬನ ಬಳಿ ಮಾತನಾಡುವುದು ಕಂಡು ಬಂದಿತ್ತು.. ಇದರ ಬೆನ್ನುಹತ್ತಿ ಹೋದ ಪೊಲೀಸರು ಆಟೋ ಚಾಲಕರನ್ನು ವಿಚಾರ ಮಾಡಿದ್ದಾರೆ. ಅಂದು ಮಧ್ಯರಾತ್ರಿ ಆರೋಪಿ ಕುಮಾರ್ ತನ್ನ ಬಳಿ ಬಂದು ರಥಕ್ಕೆ ಬೆಂಕಿ ಬಿದ್ದಿದೆ ಎಂದು ತಿಳಿಸಿದ ಎಂದು ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದರ ಆಧಾರದ ಮೇಲೆ ಆರೋಪಿ ಕುಮಾರ್ನನ್ನು ಬುಧವಾರ ಸಂಜೆ ಆತನ ಮನೆಯಲ್ಲೇ ಪೊಲೀಸರು ಬಂಧಿಸಿದರು. ಬಳಿಕ ವಿಚಾರಣೆಗೊಳಪಡಿಸಿದಾಗ ಕುಮಾರ್ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯಗಳು, ಆಟೋ ಚಾಲಕನ ಹೇಳಿಕೆ, ಇನ್ನು ಆರೋಪಿಯೇ ತಪ್ಪನ್ನು ಒಪ್ಪಿಕೊಂಡಿದ್ದು ಕುಮಾರನೇ ಈ ಕೃತ್ಯ ಎಸಗಿರುವುದು ಖಚಿತವಾಗಿದೆ ಎಂದು ಎಸ್ಪಿ ಕುಲದೀಪ್ಕುಮಾರ್ ವಿವರಿಸಿದರು. ತನಿಖಾ ತಂಡದ ವಿವರ
1ನೇ ತಂಡ: ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಮಹದೇವಯ್ಯ, ಸಿಬ್ಬಂದಿ ಮಂಜುನಾಥ, ವೀರಭದ್ರಪ್ಪ, ಕೃಷ್ಣಮೂರ್ತಿ.
2ನೇ ತಂಡ: ಗ್ರಾಮಾಂತರ ಎಸ್ಐ ಲೋಹಿತ್ಕುಮಾರ್, ಸಿಬ್ಬಂದಿ ಕುಮರೇಶ್, ಪ್ರಭುಸ್ವಾಮಿ, ಚಿನ್ನಸ್ವಾಮಿ.
3ನೇ ತಂಡ: ಸಂಚಾರಿ ಠಾಣೆ ಎಸ್ಐ ದೀಪಕ್, ಸಿಬ್ಬಂದಿ ಸುರೇಶ್, ಮಹೇಶ್, ವಿನಯ್ ಕುಮಾರ್.