Advertisement
ಜಗತ್ತಿನ ಜನರಿಗೆ ನೆಮ್ಮದಿಯ ಆಶೀರ್ವಾದ ಮಾಡಲೆಂಬ ಕಾರಣಕ್ಕೆ ಧರ್ಮಸ್ಥಳದಲ್ಲಿ ಮಂಜುನಾಥನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಯಾರಧ್ದೋ ವೈಯಕ್ತಿಕ ತೇಜೋವಧೆಗಾಗಿ ಆಣೆ ಪ್ರಮಾಣ ಮಾಡುವುದು, ದೇವರನ್ನು ಕರೆಯುವುದು ರಾಜಕಾರಣಿಗಳಿಗೆ ಸೂಕ್ತವಲ್ಲ ಎಂದು ಹೇಳಿದರು.
Related Articles
Advertisement
ಬಜೆಟ್ ಬಗ್ಗೆ ಕೆಟ್ಟದ್ದು ಅಥವಾ ಒಳ್ಳೆಯದ್ದು ಎಂದು ಹೇಳುವುದಕ್ಕಿಂತಲೂ ಬಜೆಟ್ ಎಂದ ಮೇಲೆ ಕಳೆದ ವರ್ಷ ಏನೆಲ್ಲಾ ಕೊಡಲಾಗಿದೆ ಅದು ಅನುಷ್ಠಾನವಾಗಿದೆಯೋ, ಇಲ್ಲವೋ ಎಂಬ ಅರಿವು ಇರಬೇಕು. ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳು ಅನುಷ್ಠಾನವಾದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತೆ ಎಂದರು.
ಅಸ್ಥಿರಗೊಳಿಸುವುದು ಅಪರಾಧ: ಒಂದು ಸರ್ಕಾರ ರಚನೆಯಾದ ನಂತರ ಅದನ್ನು ಅಸ್ಥಿರಗೊಳಿಸುವುದು ಅಪರಾಧ. ಪೂರ್ಣಪ್ರಮಾಣದ ಸರ್ಕಾರ ಇರಬಹುದು. ಅಥವಾ ಸಮ್ಮಿಶ್ರ ಸರ್ಕಾರವೇ ಆಗಿರಬಹುದು. ಆ ಸರ್ಕಾರ ಸಂಪೂರ್ಣವಾಗಿ ನಡೆಯಲು ಅವಕಾಶ ಕೊಡಬೇಕು. ಬಹುಮತದ ವ್ಯತ್ಯಾಸವೋ ಅಥವಾ ನಾಯಕನ ಮೇಲೆ ವಿಶ್ವಾಸವಿಲ್ಲದಿದ್ದರೆ ಅವಿಶ್ವಾಸ ಮಂಡನೆ ಮಾಡಬಹುದು. ಅದು ಬಿಟ್ಟು ಆಪರೇಷನ್ ಮಾಡುವುದು ಸರಿಯಲ್ಲ ಎಂದರು.
ಅಸಮಾಧಾನಕ್ಕೆ ಯಾರು ಕಾರಣ: ಯಾಡಿಯೂರಪ್ಪನವರು ಯಾವ ಕಾರಣಕ್ಕೆ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೋ ಅಥವಾ ಶಾಸಕರು ಏಕೆ ಅಸಮಾಧಾನಗೊಂಡಿದ್ದಾರೋ ಎಂಬುದನ್ನು ತಿಳಿದು ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು.
ಇದಕ್ಕೆ ಯಾರು ಕಾರಣ ಎಂಬುದರ ಕುರಿತಂತೆ ಚರ್ಚೆ ನಡೆಯಬೇಕು. ಅದು ಬಿಟ್ಟು ಗೊಂದಲಗಳಲ್ಲೇ ಮುಳುಗಿ ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ಅದು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗುತ್ತದೆ. ಜೊತೆಗೆ ಅಪರೇಷನ್ ಕಮಲದಂತಹ ಪ್ರಕ್ರಿಯೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.