Advertisement

ಬ್ಯಾಂಕ್‌ ಮಾಹಿತಿ ಕೊಡದಿದ್ರೂ ಹಣ ಕಳವು : ಸಾರ್ವಜನಿಕರೇ ಎಚ್ಚರ,112 ಗೆ ಕರೆ ಮಾಡಿ

01:32 PM Nov 11, 2021 | Team Udayavani |

ಬೆಂಗಳೂರು: ಮಹಿಳೆಯೊ ಬ್ಬರು ತಮ್ಮ ಹಣ ಕಾಸಿನ  ವಹಿವಾ ಟಿಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡದಿದ್ದರೂ ದುಷ್ಕ ರ್ಮಿಗಳು ಅವರ ಖಾತೆಯಿಂದ ಒಂದೂವರೆ ಲಕ್ಷ ರೂ. ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಬಿ.ನಾರಾಯಣ ಪುರ ನಿವಾಸಿ ಹೇಮಾ ಸಂಗೀತ ದೇವಿ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರ ಮಹಿಳೆ ರಾಷ್ಟ್ರೀಯ ಬ್ಯಾಂಕ್‌ ವೊಂದ ರಲ್ಲಿ ಖಾತೆ ಹೊಂದಿದ್ದಾರೆ. ಈ ಮಧ್ಯೆ ಅ.25ರಿಂದ ಅ.28ರವ ರ ಅವಧಿಯಲ್ಲಿ ತಮ್ಮ ಖಾತೆಯಿಂದ 1,48,585 ರೂ. ಕಳವು ಮಾಡಲಾಗಿದೆ. ಆದರೆ, ಯಾವುದೇ ವ್ಯಕ್ತಿಗೆ ಬ್ಯಾಂಕ್‌ ಖಾತೆ ವಿವರ, ಡಿಬಿಟ್‌, ಕ್ರೆಡಿಟ್‌ ಮಾಹಿತಿ ಯಾ ಗಲಿ, ಓಟಿಪಿಯಾಗಲಿ ನೀಡಿಲ್ಲ. ಆದರೂ ಸಹ ಹಣ ಕಳವು ಮಾಡಲಾಗಿದೆ.

ಈ ಸಂಬಂಧ ಅಕ್ರಮವಾಗಿ ಹಣ ಕಳವು ಮಾಡಿ ರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೇಮಾ ದೂರು ನೀಡಿ ದ್ದಾರೆ.

ಸಾರ್ವಜನಿಕರೇ ಎಚ್ಚರಿಕೆ; 112ಗೆ ಕರೆ ಮಾಡಿ

ನಿಮ್ಮ ವ್ಯವಹಾರಕ್ಕೆ ಸಂಬಂಧಿ ಸಿ ದಂತೆ ಯಾವುದೇಅನುಮಾನಾಸ್ಪದ ಕರೆ ಗಳು, ಕ್ಯೂಆರ್‌ಕೋಡ್‌ಗಳು ಬಂದಲ್ಲಿ ತಡಮಾಡ ಬೇಡಿ. ಯಾವುದೇ ಮಾಹಿತಿ ಅಥವಾ ಸ್ಕ್ಯಾನ್‌ ಮಾಡ ಬೇಡಿ. ಕೂಡಲೇ ಸಮೀಪದ ಸೈಬರ್‌ ಠಾಣೆಯನ್ನು ಸಂಪರ್ಕಿಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next