Advertisement

ಗ್ರಾಮೀಣ ಕ್ರೀಡೆಗಳ ಉಳಿಸಿ ಬೆಳೆಸಲು ಗಣ್ಯರ ಕರೆ

11:54 PM Apr 25, 2019 | sudhir |

ಮಡಿಕೇರಿ: ಯರವ ಸಮಾಜದ ಆಶ್ರಯದಲ್ಲಿ ಗಿರಿಜನ ಸಮೂಹಕ್ಕೆ ನಡೆಸಿಕೊಂಡು ಬರುತ್ತಿರುವ, ಇಡೆಮಲೆಲಾತ್ಲೆàರ ಕುಟುಂಬದ ಆತಿಥ್ಯದ 8ನೇ ವರ್ಷದ ಯರವ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ವೀರಾಜಪೇಟೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಯರವ ಸಮುದಾಯದ ಯುವಕ ಯುವತಿಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನ ಸೆಳೆದರು.ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಐದು ದಿನಗಳ ಕಾಲ ನಡೆಯುವ ಕ್ರೀಡೋತ್ಸವವನ್ನು ಸಮಾಜ ಬಾಂಧ‌ವರು ಸಾಂಪ್ರದಾಯಿಕವಾಗಿ ಗುರು ಹಿರಿಯರಿಗೆ ನಮಿಸಿ, ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

Advertisement

ಕ್ರಿಕೆಟ್‌ ಹಬ್ಬದ ಸವಿ ನೆನಪಿಗಾಗಿ ಮೈದಾನದ ಬದಿಯಲ್ಲಿ ಅತಿಥಿಗಳು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆೆಯ ಮಹತ್ವವನ್ನು ಸಾರಿದ್ದು ವಿಶೇಷ. ಉದ್ಘಾಟನಾ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ‌ ಕಾಡ್ಯಮಾಡ ಮನುಸೋಮಯ್ಯ, ಸಮುದಾಯ ಬಾಂಧವರನ್ನು ಒಂದೆಡೆ ಸೇರಿಸಲು ಕ್ರೀಡಾಕೂಟಗಳು ಸಹಕಾರಿಯಾಗಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ನೆಲೆಸಿರುವ ಯರವ ಸಮುದಾಯ ಬಾಂಧವರನ್ನು ಒಟ್ಟಾಗಿ ಸೇರಿಸಿ ತಮ್ಮ ಹಕ್ಕುಗಳನ್ನು ಪಡೆಯುವಂತೆ ಕರೆ ನೀಡಿದರು. ಕ್ರಿಕೆಟ್‌ ಪಂದ್ಯಾವಳಿಗೆ ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಬ್ಯಾಟ್‌ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು, ಇವುಗಳನ್ನು ಉಳಿಸುವ ಕೆಲಸವನ್ನು ಸಮಾಜ ಬಾಂಧ‌ವರು ಮಾಡಬೇಕು.ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕ್ರೀಡೆ ಸಹಕಾರಿಯಾಗಿದೆ ಎಂದರು. ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷರಾದ ಶರತ್‌ ಕಾಂತ್‌, ದಾನಿಗಳಾದ ಉಂಬಾಯಿ ಉಪಸ್ಥಿತರಿದ್ದರು.ಯರವ ಸಮಾಜದ ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ಸಂಚಾಲಕ ಸಿದ್ದಪ್ಪ ಕಾರ್ಯಕ್ರಮ ನಿರೂಪಿಸಿದರು. ನಿತಿನ್‌ ವಂದಿಸಿದರು.

ಕ್ರೀಡೋತ್ಸವದ ಅಂಗವಾಗಿ ಆದಿವಾಸಿ ಮಹಿಳೆಯರಿಗೆ, ಪುರುಷರಿಗೆ ಏರ್ಪಡಿಸಿದ್ದ ಹಗ್ಗ -ಜಗ್ಗಾಟ, ಬಿಂದಿಗೆಯಲ್ಲಿ ನೀರು ತರುವ ಸ್ಪರ್ಧೆ ಗೋಣಿಚೀಲ ನಡಿಗೆ ಸ್ಪರ್ಧೆ ನೋಡುಗರನ್ನು ರಂಜಿಸಿತು.

ಅನುದಾನಕ್ಕೆ ಆಗ್ರಹ
ಯರವ ಸಮಾಜದ ಅಧ್ಯಕ್ಷ‌ ಶಾಂತಕುಮಾರ್‌ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇನ್ನು ಮುಂದಿನ ವರ್ಷದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ತಂಡಗಳು ತಮ್ಮ ಮನೆತನದ ಹೆಸರಿನಲ್ಲಿಯೇ ನೋಂದಾವಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರಲ್ಲದೆ, ಸರ್ಕಾರ ಯರವ ಸಮುದಾಯವನ್ನು ಗುರುತಿಸಿ ಕ್ರೀಡೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ದರು. ಹೆಗ್ಗಡೆ ಸಮಾಜದ ಉಪಾಧ್ಯಕ್ಷ‌ ಕೊರಕುಟ್ಟಿàರ ಸರ ಚಂಗಪ್ಪ ಮಾತನಾಡಿ, ಅಳಿವಿನ ಅಂಚಿನ ಲ್ಲಿರುವ ಯರವ ಸಮುದಾಯವನ್ನು ರಕ್ಷಿಸುವ ಜವಾಬ್ದಾರಿ ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಿದ್ಯಾಭ್ಯಾಸಕ್ಕೆ ಸಮಾಜ ಬಾಂಧವರು ಒತ್ತು ನೀಡಬೇಕೆಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next