Advertisement

16ರಂದು ನರಗುಂದ ಬಂದ್‌ಗೆ ಕರೆ

10:16 AM Jul 07, 2019 | Team Udayavani |

ನರಗುಂದ: ಜೀವ ಜಲಕ್ಕಾಗಿ ನಡೆಸಿಕೊಂಡ ಬಂದ ಮಹದಾಯಿ ಹೋರಾಟ ನಾಲ್ಕು ವರ್ಷಗಳನ್ನು ಪೂರೈಸುತ್ತಿದ್ದರೂ ಇದುವರೆಗೆ ಸರ್ಕಾರಗಳ ಕಡೆಗಣನೆ ರೈತರನ್ನು ವಂಚಿಸುತ್ತಿದೆ. ಸರ್ಕಾರಗಳ ನಿರ್ಲಕ್ಸ್ಯ ಧೋರಣೆ ಖಂಡಿಸಿ ಜು.16ರಂದು ನರಗುಂದ ಬಂದ್‌ ಕರೆ ನೀಡಲಾಗಿದೆ. ಸಮಸ್ತ ರೈತ ಬಾಂಧವರು ಕೈಜೋಡಿಸಬೇಕು ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ ಹೇಳಿದರು.

Advertisement

ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1449ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಕಳೆದ 4 ದಶಕಗಳಿಂದ ಯೋಜನೆ ವಿಷಯದಲ್ಲಿ ರೈತರ ಕಣ್ಣೊರೆಸುತ್ತಲೇ ಬಂದಿರುವ ಜನಪ್ರತಿನಿದಿಗಳು, ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ತಮ್ಮ ನಿರ್ಲಕ್ಸ್ಯ ಧೋರಣೆ ಮುಂದುವರೆಸಿದೆ. ಇದು ಸಮಸ್ತ ರೈತ ಕುಲದಲ್ಲಿ ಅಸಹನೆ ಮೂಡಿಸುತ್ತಿದೆ ಎಂದು ಫಕೀರಪ್ಪ ಜೋಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

ಸತ್ಯಾಗ್ರಹ ನಿರತ ರೈತ ಮಹಿಳೆ ಲಕ್ಷ್ಮಿ ಭಾಯಿ ಮಾನೆ ಮಾತನಾಡಿ, ನೀರಿಗಾಗಿ ಇಷ್ಟು ವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಆಳುವ ಸರ್ಕಾರಗಳಿಗೆ ಇದರ ಕಾಳಜಿಯಿಲ್ಲ. ಇನ್ನಾದರೂ ಸರ್ಕಾರಗಳು ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸಿದರು. ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ, ಯಲ್ಲಪ್ಪ ಗುಡದರಿ, ಲಕ್ಷ ್ಮಣ ಮನೇನಕೊಪ್ಪ, ವೆಂಕಪ್ಪ ಹುಜರತ್ತಿ, ಹನಮಂತಪ್ಪ ಪಡೆಸೂರ, ಮಲ್ಲಪ್ಪ ಐನಾಪೂರ, ವಾಸು ಚವ್ಹಾಣ, ವೆಂಕಟೇಶ ಸಾಬಳೆ, ಈರಣ್ಣ ಗಡಗಿ, ಮಲ್ಲೇಶಪ್ಪ ಬಾಳಿಕಾಯಿ, ಹನುಮಂತ ಸರನಾಯ್ಕರ, ಹನುಮಂತ ಕೋರಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾಯಿ, ದೇವಕ್ಕ ತಾಳಿ, ಮಾಬೂಬಿ ಕೆರೂರ, ಚನ್ನವ್ವ ಕರ್ಜಗಿ ಸೇರಿ ಹೋರಾಟಗಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next