Advertisement

ಕಲ್ಲಿಕೋಟೆ: ಜ್ವರದಿಂದ ಅಸುನೀಗಿದವರ ರಕ್ತದ ಮಾದರಿ ಮಣಿಪಾಲ ಆಸ್ಪತ್ರೆಗೆ

10:06 AM May 21, 2018 | Team Udayavani |

ಕಲ್ಲಿಕೋಟೆ: ಕೇರಳದ ಕಲ್ಲಿಕೋಟೆನ ಪೆರಾಂಬ್ರ ಪಟ್ಟಣದ ವ್ಯಾಪ್ತಿಗೆ ಬರುವ ಚಂಗರೋತ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಕುಟುಂಬದ  ಮೂವರು ಸದಸ್ಯರು ನಿಗೂಢ ಜ್ವರಕ್ಕೆ ಪ್ರಾಣ ತೆತ್ತಿರುವುದು ಕೇರಳ ಸರ್ಕಾರದ ನಿದ್ದೆಗೆಡಿಸಿದೆ. ಮೃತರ ರಕ್ತದ ಮಾದರಿಗಳನ್ನು ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಯಾವ ಜ್ವರದಿಂದಾಗಿ ಅವರು ಅಸುನೀಗಿದ್ದಾರೆಂದು ಅಲ್ಲಿ ಖಚಿತವಾಗಲಿದೆ. ಜ್ವರದಿಂದಾಗಿ  ಕುಟುಂಬದ 20 ವರ್ಷದೊಳಗಿನ ಇಬ್ಬರು ಹುಡುಗರು ಮತ್ತು ಅವರ ಚಿಕ್ಕಮ್ಮ ಅಸುನೀಗಿದ್ದಾರೆ. ಆಸ್ಪತ್ರೆಗೆ ದಾಖಲಾದಾಗ, ಈ ಮೂವರಲ್ಲಿ ಮಯೋಕಾರ್ಡಿಟಿಸ್‌ ಸಹಿತವಾದ ವೈರಲ್‌ ಎನ್‌ಕೆ ಫಾಲಿಟೀಸ್‌ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಆನಂತರ ಕೆಲ ವೈದ್ಯರು ಇದನ್ನು ಅಲ್ಲಗಳೆದಿದ್ದಾರೆ. ಹಾಗಾಗಿ, ರೋಗದ ನಿಖರ ಪತ್ತೆಗಾಗಿ ಮೃತರ ರಕ್ತದ ಮಾದರಿಗಳನ್ನು ಮಣಿಪಾಲ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next