Advertisement

ಕೋಲ್ಕತ : ಎ.2ರ ವರೆಗೆ ವಕೀಲರ ಕೆಲಸ ನಿಲುಗಡೆ ಚಳವಳಿ ವಿಸ್ತರಣೆ

07:16 PM Mar 19, 2018 | Team Udayavani |

ಕೋಲ್ಕತ : ನ್ಯಾಯಾಧೀಶರ ನೇಮಕಾತಿ ಆಗ್ರಹಿಸಿ ಕಳೆದೊಂದು ತಿಂಗಳಿಂದ ಇಲ್ಲಿನ ವಕೀಲರು ನಡೆಸುತ್ತಿದ್ದ “ಕೆಲಸ ನಿಲುಗಡೆ’ ಚಳವಳಿಯನ್ನು ಎಪ್ರಿಲ್‌ 2ರ ವರೆಗೆ ವಿಸ್ತರಿಸಲಾಗಿದೆ.

Advertisement

ಜನವರಿ ಅಂತ್ಯಕ್ಕೆ 2.2 ಲಕ್ಷ ಕೇಸುಗಳು ಇತ್ಯರ್ಥಕ್ಕೆ ಬಾಕಿ ಇದ್ದ ಕಲ್ಕತ್ತಾ ಹೈಕೋಟಿನಲ್ಲಿ ವಕೀಲರ “ಕೆಲಸ ನಿಲುಗಡೆ’ ಚಳವಳಿಯು ಕಳೆದು ಫೆ.19ರಿಂದ ಆರಂಭಗೊಂಡಿತ್ತು. ಪರಿಣಾಮವಾಗಿ ನ್ಯಾಯದಾನ ಪ್ರಕ್ರಿಯೆ ತೀವ್ರವಾಗಿ ಬಾಧಿತವಾಗಿತ್ತು. 

ವಕೀಲರ ಸಂಘದ ಮೂರೂ ಘಟಕಗಳಾದ ಕಲ್ಕತ್ತಾ ಹೈಕೋರ್ಟ್‌ ಬಾರ್‌ ಅಸೋಸಿಯೇಶನ್‌, ದಿ ಬಾರ್‌ ಲೈಬ್ರರಿ ಮತ್ತು ದಿ ಇನ್‌ಕಾರ್ಪೊರೇಟೆಡ್‌ ಲಾ ಸೊಸೈಟಿ ಪ್ರತ್ಯೇಕ ಠರಾವನ್ನು ಕೈಗೊಂಡು ಕೆಲಸ ನಿಲುಗಡೆ ಚಳವಳಿಯನ್ನು ಎ.2ರ ವರೆಗೆ ವಿಸ್ತರಿಸಲು ನಿರ್ಧರಿಸಿದವು. 

Advertisement

Udayavani is now on Telegram. Click here to join our channel and stay updated with the latest news.

Next