Advertisement

ಸಚಿವಾಕಾಂಕ್ಷಿಗಳು ಮತ್ತೆ ಸದ್ದು ಮಾಡುವುದು‌‌‌ ನಿಶ್ಚಿತ: ಸಂಪುಟಕ್ಕೆ ಸರ್ಜರಿ ಪಕ್ಕಾ?

11:31 AM Mar 05, 2022 | Team Udayavani |

ಬೆಂಗಳೂರು : ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ ಆರಂಭವಾಗಲಿದೆ. ಇಷ್ಟು ದಿನಗಳ ಕಾಲ ಮೌನವಾಗಿದ್ದ ಸಚಿವಾಕಾಂಕ್ಷಿಗಳ ತಾಳ್ಮೆಯ ಕಟ್ಟೆ ಮಾರ್ಚ್10  ರ ನಂತರ ಒಡೆಯುವುದು ಗ್ಯಾರಂಟಿ ಎಂಬ ಮಾತು ಬಿಜೆಪಿ ಒಳಮನೆಯಿಂದ ಕೇಳಿ ಬರುತ್ತಿದೆ.

Advertisement

ಕಳೆದ ಎರಡು ತಿಂಗಳಿಂದ ಕೇಳಿ ಬರುತ್ತಿದ್ದ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಆಗ್ರಹಕ್ಕೆ ಪಂಚರಾಜ್ಯಗಳ ಚುನಾವಣೆ ಬ್ರೇಕ್ ಹಾಕಿದೆ.‌ಹಾಗೂ ಹೀಗೂ ವರಿಷ್ಠರ ಒಪ್ಪಿಗೆ ಪಡೆಯಲು ದಿಲ್ಲಿಗೆ ತೆರಳಿದ್ದ ಬೊಮ್ಮಾಯಿ ಅವರಿಗೆ ಕೇಂದ್ರ ಗೃಹ ಸಚಿವ “ಗುರ್ ” ಎಂದು ಕಳುಹಿಸಿದ ಮೇಲೆ ಆಕಾಂಕ್ಷಿಗಳ ಕೂಗು ಕಡಿಮೆಯಾಗಿತ್ತು.ಆದರೆ ಬೊಮ್ನಾಯಿ ಬಜೆಟ್ ಅಧಿವೇಶನ ಹಾಗೂ ಪಂಚರಾಜ್ಯ ಚುನಾವಣಾ ಫಲಿತಾಂಶ ಹೆಚ್ಚುಕಡಿಮೆ ಒಂದೇ ವೇಳೆಗೆ ಮುಕ್ತಾಯವಾಗುವುದರಿಂದ ಸಚಿವಾಕಾಂಕ್ಷಿಗಳು ಮತ್ತೆ ಸದ್ದು ಮಾಡುವುದು‌‌‌ ನಿಶ್ಚಿತ.

ಬಿಜೆಪಿ ಮೂಲಗಳ ಪ್ರಕಾರ ವರಿಷ್ಠರೂ ಕೂಡಾ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಅಥವಾ ಪುನಾರ್ರಚನೆ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ವಲಸೆ ಬಂದವರ ಪೈಕಿ ಕೆಲವರು ವಾಪಾಸ್ ಕಾಂಗ್ರೆಸ್ ಸೇರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು ಅವರನ್ನು ಸಂಪುಟದಿಂದ ಕೈ ಬಿಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೆಚ್ಚು ಕಡಿಮೆ‌ ಏಪ್ರೀಲ್ ಮೊದಲ ವಾರದ ವೇಳೆಗೆ ಕರ್ನಾಟಕದ ಎಲ್ಲ ಗೋಜಲುಗಳಿಗೆ ಅಂತ್ಯ ಹಾಡುವುದಕ್ಕೆ ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next