Advertisement

ಅಬಕಾರಿ ಬಿಟ್ಟು ಯಾವುದೇ ಖಾತೆ ಕೊಡಲಿ ನಿಭಾಯಿಸ್ತೇನೆ: ಸಚಿವ ಎಂಟಿಬಿ

07:54 PM Aug 06, 2021 | Team Udayavani |

ದೇವನಹಳ್ಳಿ: ಅಬಕಾರಿ ಖಾತೆ ಬಿಟ್ಟು ಬೇರೆ ಯಾವುದೇ ಖಾತೆಯನ್ನ ನೀಡಲಿ ನಾನು ನಿಭಾಯಿಸ್ತೇನೆ, ಅಬಕಾರಿ ಖಾತೆ ಬೇಡವೇ ಬೇಡ ಅಂತಾ ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

Advertisement

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಇಂದು ಬೆಂಗಳೂರು ಗ್ರಾಮಾಂತರ ಕೋವಿಡ್ ಉಸ್ತುವಾರಿ ವಹಿಸಿಕೊಂಡು ದೇವನಹಳ್ಳಿಯ ಬೀರಸಂದ್ರ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು.

ಇನ್ನೂ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಎಂಟಿಬಿ 29 ಜನರ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಅದರಲ್ಲಿ 8 ರಿಂದ 9 ಜನ ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕೆಲವು ಖಾತೆಗಳು ಸಣ್ಣ ಪಣ್ಣ ಅದಲು ಬದಲಾಗಿ ಹೊಸಬರಿಗೆ ಖಾತೆ ಹಂಚಿಕೆಯಾಗುವುದು ಒಂದೆರೆಡು ದಿನಗಳಲ್ಲಿ ಆಗಲಿದೆ. ಇಂದು ಸಂಜೆಯೊಳಗೆ ಯಾರ್ಯಾರಿಗೆ ಯಾವ ಖಾತೆ ಅನ್ನೋದು ಹಂಚಿಕೆಯಾಗಲಿದೆ ಎಂದರು.

ಇದನ್ನೂ ಓದಿ:ಜಡ್ಜ್ ಗಳಿಗೆ ಬೆದರಿಕೆ : ಸುಪ್ರೀಂ ಕೋರ್ಟ್‌ ಕಳವಳ

ನಾನು ಯಾವ ಖಾತೆ ಅಂತ ನಿರೀಕ್ಷೆಯಲ್ಲಿಲ್ಲ, ಯಾವ ಖಾತೆ ನೀಡಿದ್ರು ಸಾರ್ವಜನಿಕವಾಗಿ ಸಮಪರ್ಕವಾಗಿ ನಾನು ನಿಭಾಯಿಸುತ್ತೆನೆ, ಈ ಭಾರಿ ನನಗೆ ಅಬಕಾರಿ ಖಾತೆ ‌ನೀಡಲ್ಲ ಉತ್ತಮ ಖಾತೆ ಸಿಗುವ ನಿರೀಕ್ಷೆಯಿದೆ ಇದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next