Advertisement

ನಿಶ್ಚಯವಾಗದ ಸಿಎಂ ಬಿಎಸ್‌ವೈ ದೆಹಲಿ ಪ್ರವಾಸ: ದೀಪಾವಳಿ ನಂತರ ‘ಲಾಬಿ’ಡೆಲ್ಲಿಗೆ ಶಿಫ್ಟ್?

11:20 AM Nov 13, 2020 | keerthan |

ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಿರೀಕ್ಷೆಯಲ್ಲಿರುವ ಸಚಿವಾಕಾಂಕ್ಷಿಗಳಿಂದ ಪ್ರತ್ಯೇಕ ಸಭೆಗಳು ಗುರುವಾರವೂ ಮುಂದುವರಿದಿದ್ದು, ಕೆಲವರು ದೀಪಾವಳಿ ನಂತರ ದೆಹಲಿಗೆ ತೆರಳಿ ಲಾಬಿ ನಡೆಸುವ ಪ್ರಯತ್ನದಲ್ಲಿದ್ದಾರೆ.

Advertisement

ಇನ್ನೊಂದೆಡೆ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನಕ್ಕೆ ಮನವಿ ಸಲ್ಲಿಸುವ ನೆಪದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕರು ನಿಯೋಗದ ಜತೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾದರು. ಪ್ರಮುಖವಾಗಿ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ಭಾರಿ ಚರ್ಚೆಗೆ ಕಾರಣವಾಗಿದೆ.

ಶಾಸಕರ ಸಭೆ: ಈ ಮಧ್ಯೆ, ಎರಡನೇ ದಿನವೂ ಸಚಿವ ರಮೇಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ಗುರುವಾರವೂ ಕೆಲ ಶಾಸಕರು ಸೇರಿ ಸಭೆ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಶಾಸಕರು ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಬಳ್ಳಾರಿಯಿಂದ ಬಂದು ‘ಹಾಯ್ ಬೆಂಗಳೂರು’ ಎಂದಾತ;ಕಪ್ಪು ಸುಂದರಿಯ ರೂವಾರಿ ಅಕ್ಷರ ಲೋಕದ ಮಾಂತ್ರಿಕ

ಶಾಸಕರಾದ ರಾಜೂಗೌಡ, ಪ್ರೀತಂಗೌಡ, ಬೆಳ್ಳಿ ಪ್ರಕಾಶ್‌ ಇತರರು ಸಭೆಯಲ್ಲಿದ್ದರು ಎನ್ನಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಕೆ.ಪೂರ್ಣಿಮಾ ಶ್ರೀನಿವಾಸ್‌, ಬೆಳ್ಳಿ ಪ್ರಕಾಶ್‌ ಇತರರು ಭಾಗವಹಿಸಿದ್ದರು.

Advertisement

ನಿಗದಿಯಾಗದ ಭೇಟಿ: ಎರಡು- ಮೂರು ದಿನದಲ್ಲಿ ವರಿಷ್ಠರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಹೇಳಿದ್ದರು. ಆದರೆ ವರಿಷ್ಠರಿಂದ ಪ್ರತಿಕ್ರಿಯೆ ಬಾರದಿರುವುದು ಸಚಿವಾ ಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ. ಹಾಗಾಗಿ ನಿರಂತರವಾಗಿ ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಸಂಪುಟ ಸರ್ಜರಿಗೆ ಒತ್ತಡ ಹೇರಲು ಮುಂದಾದಂತಿದೆ.

ಇನ್ನೂ ಕೆಲ ಆಕಾಂಕ್ಷಿಗಳು ದೀಪಾವಳಿ ಬಳಿಕ ದೆಹಲಿಗೆ ತೆರಳಿ ಸ್ಥಾನಮಾನಕ್ಕಾಗಿ ಲಾಬಿ ನಡೆಸಲು ಚಿಂತಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ದಿನ ಕಳೆದಂತೆ ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ವಿಳಂಬವಾದಷ್ಟು ಕಗ್ಗಂಟಾಗುವ ಲಕ್ಷಣ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next