Advertisement

“ಕಳ್ಳನ ಹೆಂಡತಿ ಯಾವತ್ತಿದ್ರೂ….” ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿ

03:36 PM Jun 22, 2021 | Team Udayavani |

ಚಿಕ್ಕಮಗಳೂರು: “ಕಳ್ಳನ ಹೆಂಡತಿ ಯಾವತ್ತಿದ್ದರೂ …. ಡ್ಯಾಶ್”. ಪಕ್ಷದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ ಬಗೆಯಿದು.

Advertisement

ಚಿಕ್ಕಮಗಳೂರು ತಾಲೂಕಿನ ಖಾಂಡ್ಯದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸುಳ್ಳು ಸುದ್ದಿ ಹಬ್ಬಿಸುವವರು ಯಾರೆಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಸಿಎಂ ಬದಲಾವಣೆ ಎನ್ನುವುದು ಒಂದು ಸುಳ್ಳು ಸುದ್ದಿ. ಉಸ್ತುವಾರಿ ಅರುಣ್ ಸಿಂಗ್ ವರಿಷ್ಠರಿಗೆ ವರದಿ ಕೊಟ್ಟರು ಎನ್ನವುದೂ ಸುಳ್ಳು ಸುದ್ದಿ. ಅರುಣ್ ಸಿಂಗ್ ಮೂರು ದಿನದಿಂದ ಕೇಂದ್ರದಲ್ಲೇ ಇಲ್ಲ ಎಂದರು.

ಇದನ್ನೂ ಓದಿ:ತೃತೀಯ-ಚತುರ್ಥ ರಂಗದಿಂದ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ: ಪ್ರಶಾಂತ್ ಕಿಶೋರ್

ಪತ್ರಿಕೆ, ವಾಹಿನಿಗಳು ವರದಿ ಕೊಟ್ಟರು ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದರ ಹಿಂದೆ ಯಾರೋ ಷಡ್ಯಂತ್ರ ನಡೆಸುತ್ತಿರುವಂತಿದೆ. ಅಪಪ್ರಚಾರದಿಂದ ಸುದ್ದಿಯನ್ನು ಜೀವಂತ ಇಡುವಂತೆ ಮಾಡುತ್ತಿದ್ದಾರೆ. ಸುದ್ದಿ ಬಿಟ್ಟು ಅದನ್ನ ಚರ್ಚೆಗೆ ಹುಟ್ಟು ಹಾಕುತ್ತಾರೆ. ಕ್ರಿಯೆ, ಪ್ರತಿಕ್ರಿಯೆ ಮೂಲಕ ಅದೇ ಜೀವಂತವಾಗಿರುತ್ತದೆ. ಸುಳ್ಳು ಸುದ್ದಿಯ ಸೃಷ್ಠಿಕರ್ತರಿಂದ ಸುಳ್ಳು ಸುದ್ದಿ ಸೃಷ್ಟಿಯಾಗಿದೆ. ಯಾರಿಗೆ ಕೆಲಸ ಇಲ್ಲವೋ ಅವರಿಗೆ ಈ ರೀತಿ ಸುದ್ದಿ ಸೃಷ್ಠಿ ಮಾಡುವುದೇ ಕೆಲಸ ಎಂದು ಸಿ.ಟಿ.ರವಿ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next