Advertisement

ಕ್ವಾರಂಟೈನ್ ಷರತ್ತಿನ‌ ಮೇಲೆ ವಿದೇಶದಿಂದ ಭಾರತೀಯರನ್ನು ಕರೆತರಲಾಗುತ್ತಿದೆ: ಸಿ ಟಿ ರವಿ

03:30 PM May 08, 2020 | keerthan |

ಚಿಕ್ಕಮಗಳೂರು: ವಿದೇಶದಲ್ಲಿರೋ ಭಾರತೀಯರ ಕರೆದು ಕೊಂಡು ಬರುವ ಪ್ರಯತ್ನ ನಡೆಯುತ್ತಿದೆ. 37 ದೇಶದಲ್ಲಿರೋ ಭಾರತೀಯರ ತವರಿಗೆ ಕರೆದು ತರುವ ಯತ್ನ ನಡೆಯುತ್ತಿದೆ. ಎಲ್ಲರೂ ರಿಯಾಯಿತಿ ದರದಲ್ಲಿ ಏರ್ ಲಿಫ್ಟ್ ಮೂಲಕ ತವರಿಗೆ ಬರುತ್ತಿದ್ದಾರೆ ಎಂದು ಸಚಿವ ಸಿ.ಟ ರವಿ ಹೇಳಿದರು.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು, ಸೌದಿ ಅರೇಬಿಯಾ, ದುಬೈನಲ್ಲಿರುವವರನ್ನು ಹಡಗಿನ ಮೂಲಕ ಉಚಿತವಾಗಿ ಕರೆತರಲಾಗುತ್ತಿದೆ. ಕ್ವಾರಂಟೈನ್ ಷರತ್ತಿನ‌ ಮೇಲೆ ಸರ್ಕಾರ ಕರೆತರಲು ಮುಂದಾಗಿದೆ ಎಂದರು.

ಮೊದಲ ಆದ್ಯತೆಯಾಗಿ ವೃದ್ದರು, ಗರ್ಭಿಣಿಯರನ್ನ ಕರೆತರಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಈಗಾಗಲೇ ರಾಜ್ಯ ಸರ್ಕಾರ ಚರ್ಚೆ ನಡೆಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next