Advertisement

ರಮೇಶ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ : ಭೈರತಿ ಬಸವರಾಜ್

11:17 PM Jun 30, 2021 | Team Udayavani |

ಹುಬ್ಬಳ್ಳಿ:  ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ. ಬೇಸರ ಹಾಗೂ ಉದ್ವೇಗದಿಂದ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು. ಅವರ ಸಹೋದರರೆಲ್ಲಾ ಸಮಾಧಾನ ಮಾಡಿದ್ದಾರೆ. ಯಾವುದೋ ಒಂದು ಪ್ರಕರಣವಿದೆ. ಅದು ಇತ್ಯರ್ಥವಾದ ನಂತರ ಸಚಿವರಾಗುತ್ತಾರೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಾವು ಅವರ ಜೊತೆಗೆ ಇದ್ದೇವೆ. ಇಂದು ನಿನ್ನೆಯ ಸ್ನೇಹವಲ್ಲ. ಯುವ ಕಾಂಗ್ರೆಸ್ ಹಂತದಿಂದಲೇ ಸ್ನೇಹಿತರಾಗಿದ್ದೇವೆ. ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿವೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಗೆ ಬಿಜೆಪಿ ಆಡಳಿತ ಟೀಕಿಸುವ ನೈತಿಕತೆಯೇ ಉಳಿದಿಲ್ಲ: ಬಿ.ವೈ. ವಿಜಯೇಂದ್ರ

ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ. ಪ್ರಕರಣ ಎಸ್‌ಐಟಿ ಮುಂದೆ ಇದೆ. ಎಸ್‌ಐಟಿ ಏನು ತೀರ್ಮಾನ ಮಾಡುತ್ತಿದ್ದೆ ನೋಡಬೇಕು. ಆದರೆ ಶೀಘ್ರದಲ್ಲಿ ಪ್ರಕರಣ ಮುಗಿಯಲಿದೆ ಎನ್ನುವ ಭರವಸೆಯಿದೆ. ನಂತರ ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ ಎಂದ ಅವರು, ಮೂವರು ಬಿಜೆಪಿ ನಾಯಕರು ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಬಸವರಾಜ, ಈ ಕುರಿತು ಅವರನ್ನೇ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next