Advertisement

ಉ.ಪ್ರ, ಕೇರಳ, ಛತ್ತೀಸ್ ಗಢ್, ತ್ರಿಪುರದ 4 ಕ್ಷೇತ್ರಗಳಿಗೆ ಇಂದು ಉಪಚುನಾವಣೆ

08:28 AM Sep 24, 2019 | Team Udayavani |

ಹೊಸದಿಲ್ಲಿ: ದೇಶದ ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶ, ಕೇರಳ, ಛತ್ತೀಸ್ ಗಢ್ ಮತ್ತು ತ್ರಿಪುರ ರಾಜ್ಯಗಳ ತಲಾ ಒಂದು ಕ್ಷೇತ್ರಗಳಲ್ಲಿ ಮತದಾನ ಈಗಾಗಲೇ ಆರಂಭವಾಗಿದೆ.

Advertisement

ಉತ್ತರ ಪ್ರದೇಶದ ಹಮಿರ್ಪುರ್, ಕೇರಳದ ಪಾಲ, ಛತ್ತೀಸ್ ಗಢ್ ನ ದಂತೆವಾಡ ಮತ್ತು ತ್ರಿಪುರ ರಾಜ್ಯದ ಬಧಾರ್ ಘಾಟ್ ನಲ್ಲಿ ವಿಧಾನಸಭಾ ಉಪಚುನಾವಣೆ ನಡೆಯುತ್ತಿದೆ.

ಈ ಉಪಚುನಾವಣೆಯ ಮತ ಎಣಿಕೆ  ಸಪ್ಟೆಂಬರ್ 27ರಂದು ನಡೆಯಲಿದೆ.

ಚುನಾವಣಾ ಆಯೋಗ ಮತದಾನಕ್ಕಾಗಿ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಬಳಸುತ್ತಿದೆ.

ಕೇರಳದ ಪಾಲ ಕ್ಷೇತ್ರವನ್ನು 1967ರಿಂದ ಪ್ರತಿನಿಧಿಸುತ್ತಿದ್ದ ಕೇರಳ ಕಾಂಗ್ರೆಸ್ – ಮಣಿ ಪಕ್ಷದ ಸ್ಥಾಪಕ ಕೆ ಎಂ ಮಣಿ ಕಳೆದ ಎಪ್ರಿಲ್ ನಲ್ಲಿ ನಿಧನ ಹೊಂದಿದ ಕಾರಣ ಇಲ್ಲಿ ಸ್ಥಾನ ತೆರವಾಗಿತ್ತು.

Advertisement

ಛತ್ತೀಸ್ ಗಢ್ ನ ದಂತೇವಾಡ ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಕ್ಷೇತ್ರ. ಇಲ್ಲಿನ ಬಿಜೆಪಿ ನಾಯಕ ಭೀಮ ಮಾಂದೇವಿ ಎಪ್ರಿಲ್ 9ರಂದು ನಕ್ಸಲ್ ದಾಳಿಗೆ ಬಲಿಯಾದ ಕಾರಣ ಚುನಾವಣೆ ನಡೆದಿರಲಿಲ್ಲ. ಈ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿಯೂ ಮೃತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next