Advertisement

Byndooru; ಮಳೆ ಬಿರುಸು: ಸೋಮೇಶ್ವರ ಗುಡ್ಡ ಮತ್ತಷ್ಟು ಕುಸಿತ

01:45 AM Aug 04, 2024 | Team Udayavani |

ಬೈಂದೂರು: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೈಂದೂರು ಸೋಮೇಶ್ವರ ಗುಡ್ಡ ಮತ್ತಷ್ಟು ಜರ್ಝರಿತಗೊಂಡಿದೆ. ಅಪಾರ ಪ್ರಮಾಣದಲ್ಲಿ ಜೇಡಿ ಮಿಶ್ರಿತ ಮಣ್ಣು ಕೆಳಭಾಗಕ್ಕೆ ಬಂದಿದ್ದು, ಯಾವುದೇ ಹಂತದಲ್ಲೂ ಕುಸಿಯುವ ಭೀತಿಯಿದೆ.

Advertisement

ಒಂದು ತಿಂಗಳಿನಿಂದ ನಿರಂತರ ಮಳೆ ಆಗುತ್ತಿರುವ ಪರಿಣಾಮ ಗುಡ್ಡದ ಮಣ್ಣಿನ ತೇವಾಂಶ ಹೆಚ್ಚಿದ್ದು, ಒಂದೊಮ್ಮೆ ಗುಡ್ಡ ಕುಸಿದರೆ ಕೆಳಭಾಗದಲ್ಲಿರುವ ಹತ್ತಾರು ಮನೆಗಳು ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯ ಭೀತಿಯಿದೆ. ಸೋಮೇಶ್ವರ ಗುಡ್ಡದ ಮೇಲ್ಭಾಗ ದಲ್ಲಿ ಅರಣ್ಯ ಇಲಾಖೆಯ ಕ್ಷಿತಿಜ ನೇಸರಧಾಮ ಹಾಗೂ ಕೆಳಭಾಗದಲ್ಲಿ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಿದೆ. ಕರ್ಕಾಟಕ ಅಮಾವಾಸ್ಯೆಯಂದು ಸೋಮೇಶ್ವರ ಜಾತ್ರೆ ನಡೆಯುತ್ತಿದ್ದು, ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಳ್ಳು ಮಾಹಿತಿ: ಇಲ್ಲಿನ ರೆಸಾರ್ಟ್‌ ಮಾಲಕರು ಕಟ್ಟಡ ಪರವಾನಿಗೆ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನುವುದು ಪಟ್ಟಣ ಪಂಚಾಯತ್‌ ಕಡತದಲ್ಲಿ ಅಡಕವಾಗಿದೆ. ಕಟ್ಟಡ ಪರವಾನಿಗೆ ಪಡೆಯಲು ಭೂ ಪರಿವರ್ತನೆ ಮತ್ತು ರಸ್ತೆ ಅಗತ್ಯ. ಗುಡ್ಡದಲ್ಲಿದ್ದ ಕಾಲುದಾರಿಯನ್ನೇ ರಸ್ತೆ ಎಂದು ನಮೂದಿಸಿ ಅನುಮತಿ ಪಡೆಯಲಾಗಿದೆ. ಸದ್ಯ ಕಟ್ಟಡ ಪರವಾನಿಗೆಯನ್ನು ತಡೆಹಿಡಿದಿದ್ದು ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next