Advertisement

Byndoor ; ಶಿರೂರು: ಬಸ್‌ – ಲಾರಿ ಢಿಕ್ಕಿ; ಇಬ್ಬರು ಗಂಭೀರ

10:21 PM Mar 06, 2024 | Team Udayavani |

ಬೈಂದೂರು: ಬಸ್‌ ಹಾಗೂ ಲಾರಿ ನಡುವೆ ಢಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿರೂರು ಕರಿಕಟ್ಟೆ ಬಳಿ ಬುಧವಾರ ನಡೆದಿದೆ.

Advertisement

ಬೈಂದೂರು ಕಡೆಯಿಂದ ಭಟ್ಕಳದ ಕಡೆಗೆ ಸಾಗುವ ಸರಕಾರಿ ಬಸ್ಸಿಗೆ ಬೈಕ್‌ ಅಡ್ಡ ಬಂದ ಪರಿಣಾಮ ಬಸ್‌ ಚಾಲಕ ಬ್ರೇಕ್‌ ಹಾಕಿದಾಗ ಹಿಂಬದಿಯಲ್ಲಿ ಬರುತ್ತಿದ್ದ ಮೀನು ಲಾರಿ ಡಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಲಾರಿ ಜಖಂಗೊಂಡಿದ್ದು ಇಬ್ಬರು ಗಂಭೀರ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ಸಿನ ಹಿಂಭಾಗದಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next