Advertisement

Byndoor: ಗಾಳಿ- ಮಳೆಯಿಂದ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ

12:37 AM May 24, 2024 | Team Udayavani |

ಬೈಂದೂರು: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ.

Advertisement

ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು 15 ಲಕ್ಷ ರೂ. ವ್ಯಯ ಮಾಡಿ ನಿರ್ಮಿಸಿರುವ ಊಟದ ಹಾಲ್‌ನ ಮೇಲ್ಛಾವಣಿ ಹಾರಿ ಬಿದ್ದಿದೆ.

ಬೈಂದೂರು ಪೊಲೀಸ್‌ ಠಾಣೆಯ ಆವರಣದಲ್ಲಿ ಹಳೆ ವೃತ್ತ ನಿರೀಕ್ಷಕರ ಕಚೇರಿಯ ಮೇಲೆ ಮರ ಉರುಳಿದೆ. ಪಡುವರಿ ಗ್ರಾಮದ ದೊಂಬೆ ಕೋಟಿಮನೆ ಕೊಲ್ಲೂರಿ ಪೂಜಾರ್ತಿ ಮನೆ ಮೇಲೆ ಮರ ಬಿದ್ದಿದೆ. ಛಾವಣಿ ಕುಸಿತ, ಮರ ಉರುಳಿರುವುದು, ರಸ್ತೆ ಮೇಲೆ ವಿದ್ಯುತ್‌ ಕಂಬ ಉರುಳಿರುವುದು ಸೇರಿದಂತೆ ವಿವಿಧ 16ಕ್ಕೂ ಹೆಚ್ಚಿನ ಅವಘಡ ದಾಖಲಾಗಿದೆ. ಬೈಂದೂರಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next