Advertisement

Byndoor ಚಿನ್ನಾಭರಣ ಮಳಿಗೆಗೆ ವಂಚನೆ

12:29 AM Nov 22, 2023 | Team Udayavani |

ಬೈಂದೂರು: ಉಪ್ಪುಂದ ನಿತ್ಯಾನಂದ ಅವರು ಉಪ್ಪುಂದದಲ್ಲಿ ಮಾರುತಿ ಗೋಲ್ಡ್ ಚಿನ್ನಾಭರಣ ಅಂಗಡಿ ಹೊಂದಿದ್ದು ಗಿರೀಶ ಎಂಬಾತನನ್ನು ಮ್ಯಾನೇಜರ್‌ ಆಗಿ ನೇಮಿಸಿಕೊಳ್ಳಲಾಗಿತ್ತು.ಆರೋಪಿ ಗಿರೀಶ್‌ ಹಣದ ಅವ್ಯವಹಾರ ಮಾಡಿದ್ದು ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

ಈ ಕುರಿತು ನ್ಯಾಯಾಲಯದಿಂದ ಜಾಮೀನು ಪಡೆದು ಬಂದ ಬಳಿಕ ಮತ್ತೆ ಗ್ರಾಹಕರಿಂದ ಅನಧಿಕೃತವಾಗಿ ಹಣ ಸಂಗ್ರಹಿಸಿ ವಂಚಿಸಿರುವುದಾಗಿ ದೂರು ದಾಖಲಾಗಿದೆ.

ಸಂಸ್ಥೆಗೆ ಗ್ರಾಹಕರಿಂದ ಬರಬೇಕಾಗಿದ್ದ 69,86,000 ರೂ.ಗಳಲ್ಲಿ ಆರೋಪಿ ಉಪ್ಪುಂದ ಪರಿಸರದ ಗ್ರಾಹಕರಿಂದ ಒಟ್ಟು 34.53 ಲಕ್ಷ ರೂ.ಗಳನ್ನು ನಗದು, ಗೂಗಲ್‌ ಪೇ ಹಾಗೂ ಫೋನ್‌ ಪೇ ಮೂಲಕ ಸಂಗ್ರಹಿಸಿ ವಂಚಿಸಿದ್ದಾನೆ ಎಂಬುದಾಗಿ ಬೈಂದೂರು ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next