Advertisement

ಬೈಂದೂರು: ಗುಂಡಿ ಮುಚ್ಚಿದ ಐ.ಆರ್‌.ಬಿ.

12:30 AM Mar 16, 2019 | |

ಬೈಂದೂರು: ಶಿರೂರಿನ ಹಲವೆಡೆ ತೆರೆದ ಚರಂಡಿ ಗುಂಡಿಗಳನ್ನು ಐ.ಆರ್‌.ಬಿ ಕಂಪೆನಿ ಮುಚ್ಚುವ ಕೆಲಸ ಮಾಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಗುಂಡಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿವೆ.

Advertisement

ಶಿರೂರಿನ ಹೆದ್ದಾರಿ ಇಕ್ಕೆಲಗಳಲ್ಲಿ ಕೆಲವು ತಿಂಗಳುಗಳ ಹಿಂದೆ ಚರಂಡಿಗೆ ಕಾಂಕ್ರೀಟ್‌ ಮೇಲ್ಚಾವಣೆ ಮೂಲಕ ಮುಚ್ಚಲಾಗಿತ್ತು. ಆದರೆ ಕೆಲವು ಕಡೆ ತೆರೆದ ಗುಂಡಿಗಳು ಹಾಗೇ ಉಳಿದಿದ್ದವು. ಇದರಿಂದಾಗಿ ಪಾದಚಾರಿ, ಜಾನುವಾರು ಗಳು ಹೊಂಡಕ್ಕೆ  ಬಿದ್ದ ಘಟನೆ ನಡೆದಿದ್ದವು. ಜತೆಗೆ  ಕಸ-ಕಡ್ಡಿ ಗಳನ್ನು ಕೂಡ ಈ ಗುಂಡಿ ಗಳಲ್ಲಿ ಎಸೆಯುತ್ತಿರುವುದರಿಂದ ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. 
ಈ ಕುರಿತು ಉದಯವಾಣಿ ಕೆಲವು ದಿನಗಳ ಹಿಂದೆ ವರದಿ ಪ್ರಕಟಿಸಿ ಎಚ್ಚರಿ ಸಿತ್ತು. ವರದಿಗೆ ಸ್ಪದಿಸಿದ ಐ.ಆರ್‌.ಬಿ . ಕಂಪೆನಿ ಶಿರೂರಿನ ವಿವಿಧ ಕಡೆ ಇರುವ ಇಂತಹ ತೆರೆದ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next