Advertisement

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

01:01 PM May 06, 2024 | Team Udayavani |

ರಿಪ್ಪನ್‌ಪೇಟೆ: ಸಮೀಪದ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಕಾಡಾನೆ ದಾಳಿಯಿಂದ ಮೃತಪಟ್ಟ ರೈತ ತಿಮ್ಮಪ್ಪ ಮಡಿವಾಳ ಅವರ ಮನೆಗೆ ಸಂಸದ ಬಿ.ವೈ.
ರಾಘವೇಂದ್ರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

ಈ ದುರ್ಘ‌ಟನೆ ನಡೆದ ಬಗ್ಗೆ ತಿಳಿದಾಗ ನಾನು ಬೈಂದೂರಿನಲ್ಲಿದ್ದೆ. ವಿಷಯ ತಿಳಿದು ಬಹಳ ನೋವಾಯಿತು. ದೇವರು ತಿಮ್ಮಪ್ಪರವರ ಅತ್ಮಕ್ಕೆ ಶಾಂತಿ ನೀಡಲಿ.
ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ವೈಯಕ್ತಿಕ ಧನ ಸಹಾಯ ಮಾಡಿದರು. ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ
ಟಿ.ಡಿ.ಮೇಘರಾಜ್‌, ಜಿಪಂ ಮಾಜಿ ಸದಸ್ಯ ಸುರೇಶ್‌ ಸ್ವಾಮಿರಾವ್‌, ತಾಪಂ ಮಾಜಿ ಅಧ್ಯಕ್ಷ ವೀರೇಶ್‌ ಅಲುವಳ್ಳಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌. ವರ್ತೇಶ್, ಬಿಜೆಪಿ ಮುಖಂಡರಾದ ಎಂ.ಎನ್‌. ಸುಧಾಕರ್‌, ಎಚ್‌.ಎಸ್‌. ಕೀರ್ತಿಗೌಡ, ದೇವೇಂದ್ರಪ್ಪ ಗೌಡ ವಾರೆಕೊಪ್ಪ, ರಾಜು ದೂನ(ಸೋಮಶೇಖರ), ಕೆಂಚಿಕೆರೆ
ಗಣಪತಿ, ಷಣ್ಮುಖಪ್ಪ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next