Advertisement

ಉಪ ಚುನಾವಣೆ: ಅಭ್ಯರ್ಥಿಗಳ ಖರ್ಚಿನ ಗಣನೆ ಸಲ್ಲಿಕೆ

11:17 PM Oct 10, 2019 | Team Udayavani |

ಕಾಸರಗೋಡು: ಮಂಜೇಶ್ವರ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಗಳ ಚುನಾವಣೆ ವೆಚ್ಚದ ಗಣನೆಗಳನ್ನು ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆಗೆ ನಿಗದಿ ಮಾಡಲಾದ ದಿನದಿಂದ ತೊಡಗಿ ಅ. 8 ವರೆಗಿನ ಖರ್ಚಿನ ಗಣನೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಎಕ್ಸ್‌ಪೆಂಡೀಚರ್‌ ಮಾನಿಟರಿಂಗ್‌ ಸೆಲ್‌ಗೆ ಈ ಗಣನೆಗಳನ್ನು ಹಸ್ತಾಂತರಿಸಲಾಗಿದೆ. ಎಕ್ಸ್‌ ಪೆಂಡೀಚರ್‌ ನಿರೀಕ್ಷಕ ಕಮಲ್‌ ಜೀತ್‌ ಕೆ. ಕಮಲ್‌ ಅವರ ನೇತೃತ್ವದಲ್ಲಿ ಸಹಾಯಕ ಎಕ್ಸ್‌ ಪೆಂಡೀಚರ್‌ ಟಿ.ಇ. ಜನಾರ್ದನನ್‌, ಜಿಲ್ಲಾ ಹಣಕಾಸು ಅಧಿಕಾರಿ ಕೆ. ಸತೀಶನ್‌ ತಂಡ ಗಣನೆಗಳನ್ನು ಪರಿಶೀಲಿಸಿದೆೆ.
ಚುನಾವಣೆ ಅಧಿಕಾರಿ ವಿತರಣೆ ಮಾಡಿರುವ ಇಲೆಕ್ಷನ್‌ ಎಕ್ಸ್‌ಪೆಂಡೀಚರ್‌ ರಿಜಿಸ್ಟರ್‌ನಲ್ಲಿ ಅಭ್ಯರ್ಥಿಗಳು ದಾಖಲಿಸಿರುವ ಮಾಹಿತಿ ಗಳನ್ನು ಎಕ್ಸ್‌ಪೆಂಡಿಚರ್‌ ಮಾನಿಟರಿಂಗ್‌ ಸೆಲ್‌ನ ನಿಗಾದಲ್ಲಿ ದಾಸ್ತಾನು ಇರಿಸಲಾದ ಶಾಡೋ ಅಬ್ಸರ್‌ವೆàಶನ್‌ ರಿಜಿಸ್ಟರ್‌ನೊಂದಿಗೆ ಹೋಲಿಸಿ ನೋಡುವುದು ಇಲ್ಲಿನ ಕ್ರಮ. ಗಣನೆಗಳನ್ನು ಸಲ್ಲಿಸದೇ ಇದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಚುನಾವಣೆ ಅಧಿಕಾರಿಗಳು ನೋಟಿಸು ರವಾನಿಸಿದ್ದಾರೆ. ವ್ಯತ್ಯಾಸಗಳಿರುವ ಅಭ್ಯರ್ಥಿಗಳಿಗೆ ಚುನಾವಣೆ ಅಧಿಕಾರಿಗಳು ನೋಟೀಸು ಕಳುಹಿಸಿದ್ದಾರೆ. 48 ತಾಸುಗಳ ಅವಧಿಯಲ್ಲಿ ಅಭ್ಯರ್ಥಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿದೆ. ಸ್ಪಷ್ಟೀಕರಣ ತೃಪ್ತಿಕರವಲ್ಲದೇ ಇದ್ದಲ್ಲಿ ಪ್ರಜಾಪ್ರಭುತ್ವ ನೀತಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನೂತನ ಗಣನೆಗಳನ್ನು ಅ. 14 ಮತ್ತು 18ರಂದು ಸಲ್ಲಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next