Advertisement

By Election; ಸಂಡೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಜನಾರ್ದನ ರೆಡ್ಡಿ- ಶ್ರೀರಾಮುಲು

04:06 PM Oct 25, 2024 | Team Udayavani |

ಬಳ್ಳಾರಿ: ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಟ್ಟಗೆ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

Advertisement

ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ, ಕಳೆದೊಂದು ವಾರದಿಂದ ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸುತ್ತಾಡಿದ್ದೇನೆ. ಜನರು ಸ್ವಯಂಪ್ರೇರಿತವಾಗಿ ಬರುತ್ತಿದ್ದಾರೆ. ಹೆಚ್ಚು ಹೆಚ್ಚು ಜನರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ನ ಎಷ್ಟೋ ಹೇಳಿಕೆಗಳು ಹುಸಿಯಾಗಿವೆ. ನಾನು ಬಳ್ಳಾರಿ ಉಸ್ತುವಾರಿಯಾಗಿದ್ದಾಗ 250 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇನೆ. ಕಾಂಗ್ರೆಸ್ ನವರು ಹಾಕಿದ ರಸ್ತೆ ಕಿತ್ತು ಹೋಗ್ತಿವೆ. ಡಿಎಂಎಫ್, ಸಿಎಸ್ ಆರ್ ಫಂಡ್ ದುರುಪಯೋಗ ಆಗುತ್ತಿದೆ ಎಂದರು.

ನಾನು, ನನ್ನ ಗೆಳೆಯ ಶ್ರೀರಾಮುಲು ಇಬ್ಬರೂ ಪ್ರಚಾರ ಮಾಡುತ್ತೇವೆ. ತುಕಾರಾಂ ತಮ್ಮನ್ನು ತಾವೇ ರಾಜ ಎಂದು ಹೇಳಿಕೊಂಡಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ದೊಡ್ಡ ಮಟ್ಟಕ್ಕೆ ಬೆಳೆದ ಶ್ರೀರಾಮುಲು ಯಾವತ್ತೂ ಹಾಗೇ ಹೇಳಿಲ್ಲ. ತುಕಾರಾಂ ಲೂಟಿ ರಾಜ ಎಂದು ರೆಡ್ಡಿ ಲೇವಡಿ ಮಾಡಿದರು.

ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಎಷ್ಟು ಬಳಕೆಯಾಗಿದೆ ಎನ್ನುವುದು ಗೊತ್ತಿದೆ. ಬಳ್ಳಾರಿ, ಕಂಪ್ಲಿ, ಸಂಡೂರು, ಕೂಡ್ಲಿಗಿಯ ನಾಲ್ಕು ಶಾಸಕರ ಮೂಲಕ ವಾಲ್ಮೀಕಿ ನಿಗಮದ ಹಣ ಹಂಚಿದ್ದಾರೆ. ಇದೆಲ್ಲವನ್ನೂ ಇಡಿಯವರು ಚಾರ್ಜ್ ಶೀಟ್ ಉಲ್ಲೇಖ ಮಾಡಿದ್ದಾರೆ. ಆದರೆ ತುಕಾರಾಂ ಕೆಳಗೆ ಬಿದ್ದರೂ ಮಣ್ಣು ತಗುಲಿಲ್ಲ ಅಂತಿದ್ದಾರೆ. ತುಕಾರಾಂಗೆ ಇದು ಕೊನೆಯ ಚುನಾವಣೆ. ನಾನು ಯಾವುದೇ ಆಪರೇಷನ್ ಮಾಡಿಲ್ಲ. ಸ್ವಯಂಪ್ರೇರಿತರಾಗಿ ಬಿಜೆಪಿ ಶಾಲು ಹಾಕಿ ಜನರು ಜಯಘೋಷ ಕೂಗುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಯಾವುದೇ ಅಸಮಾಧಾನವಿಲ್ಲ: ರಾಮುಲು

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ಯಾವುದೇ ಅಸಮಾಧಾನವಿಲ್ಲ. ನಾನು ಇಲ್ಲೇ ಇದ್ದೇನೆ ಪ್ರಚಾರ ಮಾಡುತ್ತೇನೆ. ನಾಮಪತ್ರ ಸಲ್ಲಿಕೆ ನಂತರ ಪ್ರಚಾರಕ್ಕೆ ಬರಬೇಕೆಂದು ಅಂದುಕೊಂಡಿದ್ದೆ ಹೀಗಾಗಿ ಈಗ ಬಂದಿದ್ದೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ. ಅದಕ್ಕೆ ವಾಲ್ಮೀಕಿ ನಿಗಮದ ಹಣ ಬಳಸಿರುವುದು ಕಾರಣ. ಲೋಕಸಭೆ ಚುನಾವಣೆಯಲ್ಲಿ 21 ಕೋಟಿ ಹಣ ದುರ್ಬಳಕೆಯಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ವೇಳೆ ಇಡಿ ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ನಾಗೇಂದ್ರ ಮತ್ತು ಅವರ ಪಿಎ ವಿಜಯ್ ಹಣ ದುರ್ಬಳಕೆ ಬಗ್ಗೆ ತಮ್ಮ ಮೊಬೈಲ್ ನಲ್ಲಿ ಉಲ್ಲೇಖ ಮಾಡಿದರು. ಯಾರಿಗೆ, ಎಲ್ಲಿ ಎಷ್ಟು ಹಣ ಕೊಟ್ಟಿದ್ದೇನೆ ಎಂದು ಫೈಲ್ ನಲ್ಲಿ ಬರೆದಿದ್ದರು. ಸಂಡೂರು ಜನರನ್ನು ಮರುಳು ಮಾಡಿ ಸುಳ್ಳು ಹೇಳಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿ ಗೆದ್ದು ತೋರಿಸಲಿ ನೋಡೋಣ ಎಂದು ಶ್ರೀರಾಮುಲು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next