Advertisement

ಆತಂಕದಲ್ಲೇ ಅಗತ್ಯ ವಸ್ತು ಖರೀದಿ

03:28 PM Mar 25, 2020 | Suhan S |

ಕನಕಪುರ: ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಯುಗಾದಿ ಆಚರಿಸಲು ಭಯ ಮತ್ತು ಆತಂಕದ ನಡುವೆ ಜನರು ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು.

Advertisement

ಯುಗಾದಿ ಹಿಂದುಗಳ ಪಾಲಿಗೆ ಹೊಸ ವರ್ಷವಿದ್ದಂತೆ, ಬೇವು-ಬೆಲ್ಲ ಸವಿಯುವ ಯುಗಾದಿ ಹಬ್ಬ ಈ ಬಾರಿ ಜನರ ಪಾಲಿಗೆ ಕರಿ ನೆರಳಾಗಿದೆ. ಸಡಗರದಿಂದ ಯುಗಾದಿ ಆಚರಿಸಲು ಉತ್ಸಹವಿದ್ದರೂ ಕೋವಿಡ್ 19 ಸೋಂಕಿನ ಭೀತಿ ಎದುರಾಗಿದೆ. ಈ ಬಾರಿ ಅಗತ್ಯ ವಸ್ತುಗಳ ಬೆಲೆ ದುಬಾರಿ ಇರಲಿಲ್ಲ. ಆತಂಕದ ನಡುವೆ ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ನಗರದಲ್ಲಿ ಜನ ಮುಗಿಬಿದ್ದರು. ಅಗತ್ಯ ವಸ್ತುಗಳಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ರೇಷನ್‌ ಅಂಗಡಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಬಂದಿದ್ದ ಗ್ರಾಮೀಣ ಭಾಗದ ಜನರು, ಹೋಟೆಲ್‌ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next