Advertisement

ಇಂದಿನಿಂದ ಬೆಂಬಲ ಬೆಲೆಯಡಿ ಭತ್ತ,ರಾಗಿ ಜೋಳ ಖರೀದಿ

08:30 PM Dec 31, 2021 | Team Udayavani |

ಬೆಂಗಳೂರು: ಇಂದಿನಿಂದ ಮಾರ್ಚ್‌ 31 ರ ವರೆಗೆ ಎಂ.ಎಸ್‌.ಪಿ ಖರಿದಿ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಹಣ ನೇರವಾಗಿ ರೈತರ ಖಾತೆಗೆ ಜಮೆ ಆಗುವ ಒಳ್ಳೆಯ ಪ್ರಕ್ರಿಯೆ ಇದಾಗಿದೆ. ಆದಷ್ಟು ಹೆಚ್ಚಿನ ರೈತರಿಗೆ ಈ ಯೋಜನೆಯ ಲಾಭ ಸಿಗುವಂತೆ ಕಾರ್ಯೋನ್ಮುಖ ಆಗುವಂತೆ ಸಚಿವ ಉಮೇಶ್‌ ಕತ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ರಾಜ್ಯದ ರೈತರಿಗೆ ಅನಕೂಲ ಆಗುವ ದೃಷ್ಟಿಯಿಂದ ಎಂ.ಎಸ್‌ ಪಿ ಯೋಜನೆ ಅಡಿಯಲ್ಲಿ, ಜೋಳ, ರಾಗಿ ಹಾಗೂ ಭತ್ತ ಖರಿದಿ ಪ್ರಕ್ರಿಯೆ ರಾಜ್ಯಾದ್ಯಂತ ಜನವರಿ 1 ರಿಂದ ಆರಂಭಿಸಲಾಗುತ್ತಿರುವ ಹಿನ್ನೆಲೆ, ಸಚಿವ ಉಮೇಶ್‌ ಕತ್ತಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಪೂರ್ವ ಭಾವಿ ಸಭೆ ನಡೆಸಿದರು.

ಎಂ.ಎಸ್‌ಪಿ ಯೋಜನೆ ರಾಜ್ಯದ ರೈತರಿಗೆ ಅನಕೂಲ ಆಗುವ ದೃಷ್ಟಿಯಿಂದ ಆರಂಭಿಸಲಾದ ಯೋಜನೆ. ಈ ಯೋಜನೆಯ ಲಾಭ ರಾಜ್ಯದ ಪ್ರತಿಯೊಬ್ಬ ರೈತರಿಗೂ ಸಿಗುವಂತಾಗಬೇಕು, ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳಿಂದ ಯಾವುದೆ ಕಾರಣಕ್ಕೂ ಖರೀದಿ ಮಾಡಕೂಡದು, ಒಂದು ವೇಳೆ ವ್ಯಾಪಾರಸ್ಥರಿಂದ ಖರೀದಿ ಮಾಡಿದರೆ, ಅಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ಉಮೇಶ್‌ ಕತ್ತಿ ಸೂಚಿಸಿದರು.

ಇದನ್ನೂ ಓದಿ:ಬಲವಂತದ ಮದುವೆ ಯತ್ನ:ಯುವತಿ ಅಪಹರಣ;ಮೂವರ ಸೆರೆ

ಪ್ರತಿ ಕ್ವಿಂಟಲ್‌ ಬಿಳಿ ಜೋಳ ಮಾಲ್ದಂಡಿಗೆ 2758 ರೂಪಾಯಿ, ಪ್ರತಿ ಕ್ವಿಂಟಲ್‌ ಬಿಳಿ ಜೋಳ ಹೈಬ್ರಿಡ್‌ ಗೆ 2738 ರೂಪಾಯಿ, ಪ್ರತಿ ಕ್ವಿಂಟಲ್‌ ಗ್ರೇಡ್‌ ಎ ಭತ್ತಕ್ಕೆ 1960 ರೂಪಾಯಿ, ಪ್ರತಿ ಕ್ವಿಂಟಲ್‌ ಸಾಮಾನ್ಯ ಗ್ರೇಡ್‌ ಭತ್ತಕ್ಕೆ 1940 ರೂಪಾಯಿ ಹಾಗೂ ಪ್ರತಿ ಕ್ವಿಂಟಲ್‌ ರಾಗಿಗೆ 3377 ರೂಪಾಯಿ ದರ ನಿಗದಿ ಮಾಡಲಾಗಿದ್ದೂ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಖರಿದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next