Advertisement

“ಗ್ರಾಮಗಳಿಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತೆ’

11:40 AM Feb 02, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಗ್ರಾಮೀಣ ಭಾಗದ ಬಗ್ಗೆ ಘೋಷಣೆಗಳನ್ನು ಕೊಟ್ಟಿದ್ದಾರೆ. ಅಗತ್ಯವಿರುವಷ್ಟು ಹಣಕಾಸು ಒದಗಿಸಿಲ್ಲ. ಸ್ವಚ್ಚ ಭಾರತ ಸಲುವಾಗಿ ಪ್ರಚಾರ ಮಾಡುವ ಕೇಂದ್ರ ಸರ್ಕಾರ ಕೇವಲ 9 ಸಾವಿರ ಕೋಟಿ ಪಾಯಿ ಒದಗಿಸಿ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

Advertisement

ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ರಾಜಕೀಯ ಇಚ್ಛಾ ಶಕ್ತಿಯಲ್ಲಿ ಕೇಂದ್ರ ಸರ್ಕಾರದ ಕೊರತೆ ಎದ್ದು ಕಾಣುತ್ತಿದೆ. ನೋಟು ಅಪನಗದೀಕರಣ ಮಾಡಿದ ನಂತರ ಬಂದಿರುವ ಹಣಕಾಸು ಉಪಯೋಗಿಸಿ ರೈತರು ಹಾಗೂ ಗ್ರಾಮೀಣ ಜನರಿಗೆ ವಿಶೇಷ ಕೊಡುಗೆಗಳು ಹರಿದು ಬರುತ್ತವೆ ಆಶಾ ಭಾವನೆ ಇಟ್ಟುಕೊಂಡಿದ್ದರು. ಮೋದಿ ಸರ್ಕಾರದ ಕೃಷಿಕರ ಬಗ್ಗೆ ಇರುವ ನಿರ್ಲಕ್ಷ್ಯ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next