Advertisement

“ಮತ್ತೆ ಉದ್ಭವ’ಚಿತ್ರೀಕರಣದಲ್ಲಿ ಬಿಝಿ

03:20 PM Jul 20, 2019 | Lakshmi GovindaRaj |

ವೈಟ್‌ ಪ್ಯಾಂಥರ್ ಕ್ರಿಯೇಟರ್ಸ್‌ ಸಂಸ್ಥೆಯವರು ನಿರ್ಮಿಸುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಮತ್ತೆ ಉದ್ಭವ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಚಿತ್ರಕ್ಕೆ 20ದಿನಗಳ ಚಿತ್ರೀಕರಣ ನಡೆದಿದೆ.

Advertisement

ವಿ .ಮನೋಹರ್‌ ಸಂಗೀತ ನಿರ್ದೇಶನರುವ ಈ ಚಿತ್ರಕ್ಕೆ ಮೋಹನ್‌ ಅವರ ಛಾಯಾಗ್ರಹಣದೆ. ಎಸ್‌.ಮೋಹನ್‌ ಸಂಭಾಷಣೆ ಬರೆದಿದ್ದಾರೆ. ವಸಂತ್‌ರಾವ್‌ ಕುಲಕರ್ಣಿ ಕಲಾನಿರ್ದೇಶನ ಹಾಗೂ ಅಪೇಕ್ಷಾ ಪುರೋಹಿತ್‌ ಅವರ ವಸ್ತ್ರ ವಿನ್ಯಾಸವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಗುರುಪ್ರಸಾದ್‌ ಮುದ್ರಾಡಿ.

“ಪ್ರಿಮಿಯರ್‌ ಪದ್ಮಿನಿ’ ಖ್ಯಾತಿಯ ಪ್ರಮೋದ್‌ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಮಿಲನ ನಾಗರಾಜ್‌. ಅವಿನಾಶ್‌, ರಂಗಾಯಣ ರಘು, ಮೋಹನ್‌, ಸುಧಾ ಬೆಳವಾಡಿ, ಶುಭಾ ರಕ್ಷಾ, ಪಿ.ಡಿ.ಸತೀಶ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next